ಜಳಗಾಂವ್‌ನಲ್ಲಿ ಮಹಾಕುಂಭ ಮೇಳಕ್ಕೆ ಹೋಗುತ್ತಿದ್ದ ತಾಪ್ತಿಗಂಗಾ ರೈಲ್ವೆ ಮೇಲೆ ಕಲ್ಲು ತೂರಾಟ !

ಜಳಗಾಂವ್ – ಪ್ರಯಾಗರಾಜ್‌ನಲ್ಲಿ ಮಹಾಕುಂಭಮೇಳಕ್ಕೆ ಹೋಗುತ್ತಿದ್ದ ತಾಪ್ತಿಗಂಗಾ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ರೈಲಿನ ಕಿಟಕಿಯ ಗಾಜು ಒಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ರೈಲು ಮಹಾಕುಂಭಮೇಳಕ್ಕಾಗಿ ಸೂರತ್‌ನಿಂದ ಪ್ರಯಾಗ್‌ರಾಜ್‌ಗೆ ಹೋಗುತ್ತಿತ್ತು. ರೈಲು ಜಳಗಾಂವ್ ತಲುಪುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರೈಲ್ವೇ ರಕ್ಷಣಾ ಪಡೆ ಪೊಲೀಸ್ ಇನ್ಸ್‌ಪೆಕ್ಟರ್ ಜ್ಞಾನೇಶ್ವರ ಪಾಟೀಲ್ ಅವರು, ಕಿಡಿಗೇಡಿ ವ್ಯಕ್ತಿಯೊಬ್ಬ ರೈಲಿಗೆ ಕಲ್ಲು ಎಸೆದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. (ಮಹಾಕುಂಭಮೇಳಕ್ಕೆ ಹೋಗುವ ರೈಲಿನ ಮೇಲೆ ಕಲ್ಲು ಎಸೆಯುವುದು ಹೇಗೆ ಕಿಡಿಗೇಡಿತವವಾಗುತ್ತದೆ ? ಪೊಲೀಸರಿಗೆ ಇದು ಅರ್ಥವಾಗುವುದಿಲ್ಲವೇ ? ಪೊಲೀಸರು ಇಂತಹ ಹೇಳಿಕೆಗಳನ್ನು ನೀಡುವುದು ಕಲ್ಲು ಎಸೆಯುವವರನ್ನು ಬೆಂಬಲಿಸಿದಂತೆ ! – ಸಂಪಾದಕರು) ಸಂಬಂಧಪಟ್ಟ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ. ಪ್ರಯಾಣಿಕರು ರೈಲ್ವೆ ಸಚಿವರು ಮತ್ತು ಮುಖ್ಯಮಂತ್ರಿಗಳಿಂದ ಭದ್ರತೆಯನ್ನು ಕೋರಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂಗಳ ಹಬ್ಬಗಳ ಸಮಯದಲ್ಲಿ ಮಾತ್ರ ಹಿಂದೂಗಳ ಸಹಿತ ಅವರ ವಾಹನಗಳು ಮತ್ತು ರೈಲುಗಳ ಮೇಲೆ ದಾಳಿಗಳು ನಡೆಯುತ್ತವೆ ಎಂಬುದನ್ನು ಗಮನಿಸಿ !
  • ಮಹಾ ಕುಂಭಮೇಳದ ಸಂದರ್ಭದಲ್ಲಿ ಭಾರತೀಯ ರೈಲ್ವೆಯಿಂದ ಪ್ರಾರಂಭಿಸಲಾದ ಎಲ್ಲಾ ವಿಶೇಷ ರೈಲುಗಳು ಕುಂಭ ಕ್ಷೇತ್ರವನ್ನು ಸುರಕ್ಷಿತವಾಗಿ ತಲುಪುವಂತೆ ರೈಲ್ವೆ ಸಚಿವರು ದಕ್ಷತೆಯನ್ನು ವಹಿಸಬೇಕು !
  • ಕುಂಭಮೇಳ ಯಾತ್ರಾರ್ಥಿಗಳ ವಿಷಯದಲ್ಲಿ ಇಂತಹ ಘಟನೆ ನಡೆದಿರುವುದು ಆತಂಕಕಾರಿ !