
ಅಮರಾವತಿ – ಜಿಲ್ಲೆಯ ಅಂಜನಗಾಂವ ಸುರ್ಜಿ ತಾಲೂಕಿನಲ್ಲಿ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳಿಗೆ ನೀಡಲಾಗಿರುವ ಜನನ ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ ನಡೆದ ಹಗರಣ ಬಯಲಾಗಿದೆ. ಹಗರಣದ ತನಿಖೆಗಾಗಿ ಭಾಜಪ ನಾಯಕ ಕಿರಿಟ್ ಸೋಮಯ್ಯ ಜನವರಿ 13 ರಂದು ಈ ತಾಲೂಕಿಗೆ ಭೇಟಿ ನೀಡಲಿದ್ದಾರೆ.
2011 ರ ಜನಗಣತಿಯ ಪ್ರಕಾರ ಅಂಜನಗಾಂವ ಸುರ್ಜಿ ತಾಲೂಕಿನ ಜನಸಂಖ್ಯೆ 1 ಲಕ್ಷ 60 ಸಾವಿರ 903ಗಳಷ್ಟಿದೆ. ಈ ಪೈಕಿ 28 ಸಾವಿರ 180 ಮುಸ್ಲಿಮರ ಜನಸಂಖ್ಯೆಯಿದೆ. ಕಳೆದ 6 ತಿಂಗಳಲ್ಲಿ ಜನನ ಪ್ರಮಾಣಪತ್ರಕ್ಕಾಗಿ 1 ಸಾವಿರ 450 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಅದರಲ್ಲಿ 1 ಸಾವಿರ 400 ಅರ್ಜಿಗಳು ಬಾಂಗ್ಲಾದೇಶದ ರೋಹಿಂಗ್ಯಾಗಳಿಂದ ಬಂದಿವೆ ಎಂದು ಕಿರಿಟ್ ಸೋಮಯ್ಯ ಅವರು ಮಾಹಿತಿ ನೀಡಿದ್ದಾರೆ, ಸದ್ಯ ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಸಂಪಾದಕೀಯ ನಿಲುವುಮೊದಲು ಮಾಲೆಗಾಂವ ಮತ್ತು ಈಗ ಅಮರಾವತಿಯಲ್ಲಿನ ಘಟನೆಗಳನ್ನು ನೋಡಿದರೆ, ಬಾಂಗ್ಲಾದೇಶಿ ನುಸುಳುಕೋರರು ಮಹಾರಾಷ್ಟ್ರದಲ್ಲಿ ಎಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ! ಇವರನ್ನು ಅಲ್ಲಿನ ರಾಜ್ಯ ಸರಕಾರ ಹೇಗೆ ನಿಯಂತ್ರಿಸಲಿದೆ ? |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ