೩೩ ಹಿರಿಯ ಪೊಲೀಸ ಅಧಿಕಾರಿಗಳ ಸಮಾವೇಶ

ಶ್ರೀನಗರ (ಜಮ್ಮು-ಕಾಶ್ಮೀರ) – ಚುನಾವಣೆ ಆಯೋಗದಿಂದ ಜಮ್ಮು-ಕಾಶ್ಮೀರದಲ್ಲಿನ ಚುನಾವಣೆಯ ದಿನಾಂಕ ಘೋಷಿಸಲಾಗಿದೆ. ಅದಕ್ಕೂ ಮುನ್ನ ಪೊಲೀಸ ಮತ್ತು ಸಾಮಾನ್ಯ ಸರಕಾರಿ ಇಲಾಖೆಯಲ್ಲಿನ ೨೦೦ ಕ್ಕೂ ಹೆಚ್ಚಿನ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಆಗಸ್ಟ್ ೧೫ ರಂದು ದಡರಾತ್ರಿ ಸಾಮಾನ್ಯ ಸರಕಾರಿ ಇಲಾಖೆಯ ೮೯ ಜನರನ್ನು ವರ್ಗಾಯಿಸುವ ಆದೇಶ ನೀಡಲಾಗಿದೆ. ಇದರಲ್ಲಿ ಪುಂಛ ಮತ್ತು ಬಾಂದೀಪೋರಾ ಜಿಲ್ಲೆಯ ಉಪಯುಕ್ತರು, ಸಚಿವರು, ಆಯುಕ್ತರು, ಮಹಾ ಸಂಚಾಲಕರು, ಆಡಳಿತ ಸಂಚಾಲಕರು ಮತ್ತು ಇದರ ಅನೇಕ ಇಲಾಖೆಯ ಸಂಚಾಲಕರ ಸಮಾವೇಶ ಇದೆ. ಈ ಪ್ರಕ್ರಿಯೆ ನಡೆಸುವ ಹಿಂದಿನ ಉದ್ದೇಶ ಯಾವುದೇ ಅಧಿಕಾರಿ ಅವರ ಗೃಹಜಿಲ್ಲೆಯಲ್ಲಿನ(ಸ್ವಂತ ಜಿಲ್ಲೆಯಲ್ಲಿನ) ಸ್ಥಾನದಲ್ಲಿ ಇರಬಾರದು. ಹಾಗೂ ಅವರು ಯಾವುದೇ ಒಂದು ಸ್ಥಾನದಲ್ಲಿ ೨ ವರ್ಷಕ್ಕಿಂತಲೂ ಹೆಚ್ಚಿನ ಕಾಲ ಕಳೆದಿರಬಾರದು ಎಂದಾಗಿದೆ.

ನಳಿನ ಪ್ರಭಾತ್ ಇವರನ್ನು ಜಮ್ಮು-ಕಾಶ್ಮೀರದ ವಿಶೇಷ ಪೊಲೀಸ್ ಮಹಾಸಂಚಾಲಕರಾಗಿ ನೇಮಿಸಲಾಗಿದೆ. ಈಗಿನ ಮಹಾಸಂಚಾಲಕರು ಆರ್.ಆರ್. ಸ್ವೆನ್ ಇವರು ಸಪ್ಟೆಂಬರ್ ೩೦ ರಂದು ಸೇವಾ ನಿವೃತ್ತರಾಗುವರು. ಅದರ ನಂತರ ಅಕ್ಟೋಬರ್ ೧ ರಂದು ಪ್ರಭಾತ್ ಇವರು ಹೊಸ ಪೊಲೀಸ ಮಹಾಸಂಚಾಲಕರೆಂದು ನೇಮಕಗೊಳ್ಳುವರು. ಇದರೊಂದಿಗೆ ಪೊಲೀಸ ಮಹಾನಿರೀಕ್ಷಕರು, ಉಪಮಹಾನಿರೀಕ್ಷಕರು, ಹಿರಿಯ ಪೊಲೀಸ ಅಧಿಕಾರಿಗಳು ಹೀಗೆ ೩೩ ಹಿರಿಯ ಪೊಲೀಸ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath