‘ಮುಸಲ್ಮಾನರ ಒಗ್ಗಟ್ಟಿನ ಶಕ್ತಿ ತೋರಿಸಿದರೆ, ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವಂತೆ !’ – ಹಸೀಬ್ ಅನ್ಸಾರಿ

ಬರೇಲಿಯ ಹಸೀಬ್ ಅನ್ಸಾರಿಯ ಪ್ರಚೋದನಕಾರಿ ವಾಟ್ಸಾಪ್ ಪೋಸ್ಟ್ !

ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ನವಾಬ್‌ಗಂಜ್ ಪ್ರದೇಶದ ನಿವಾಸಿ ಹಸೀಬ್ ಅನ್ಸಾರಿಯು ಇತ್ತೀಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಪ್ರಚೋದನಕಾರಿ ವಾಟ್ಸಾಪ್ ಪೋಸ್ಟ್‌ಗಳನ್ನು ವೈರಲ್ ಮಾಡಿ ವಾತಾವರಣವನ್ನು ಕದಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಅದರಲ್ಲಿ ಅವನು, ಒಂದು ವೇಳೆ ಮುಸಲ್ಮಾನರು ಒಟ್ಟಾದರೇ ಸಂಪೂರ್ಣ ಶಕ್ತಿ ಪ್ರಯೋಗಿಸಿದರೂ ಅವರನ್ನು ತಡೆಯಲು ಸಾಧ್ಯವಿಲ್ಲ, ಎಂದು ಅದರಲ್ಲಿ ಬರೆದಿದ್ದಾನೆ ! ಇಲ್ಲಿನ ಹಿಂದೂ ಸಂಘಟನೆಗಳು ಹಸೀಬ್ ಅನ್ಸಾರಿ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣದ ದಾಖಲೆ ಪಡೆದು ತನಿಖೆ ಆರಂಭಿಸಿದ್ದಾರೆ.

ಹಸೀಬ್‌ನ ಅತಿರೇಕದ ವಾಟ್ಸಾಪ್ ಪೋಸ್ಟ್‌ ಬಗ್ಗೆ ಬರೇಲಿಯ ವಿ.ಹಿಂ.ಪ.ನ ಕಾರ್ಯಕರ್ತ ಹಿಮಾಂಶು ಪಟೇಲ್ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಾ, ಹಸೀಬ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಒಬ್ಬ ಹಿಂದೂ ನಾಯಕ ಈ ರೀತಿ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದರೆ, ಆಗ ಸಂಪೂರ್ಣ ಪ್ರಗತಿ(ಅಧೋಗತಿ)ಪರರು, ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರು ಒಂದಾಗಿ ಕೋಲಾಹಲವನ್ನೇ ಸೃಷ್ಟಿಸುತ್ತಿದ್ದರು !