ಯಾರಿಗಾದರೂ ಸ್ವಂತದ ಗುರುತನ್ನು ಬಹಿರಂಗಪಡಿಸಲು ಏನು ಸಮಸ್ಯೆ? – ಯೋಗ ಋಷಿ ರಾಮದೇವ್ ಬಾಬಾ

ಹರಿದ್ವಾರ (ಉತ್ತರಾಖಂಡ) – ನನಗೆ ನನ್ನ ಗುರುತನ್ನು ‘ರಾಮದೇವ್’ ಎಂದು ಬಹಿರಂಗಪಡಿಸಲು ಯಾವುದೇ ಅಡಚಣೆ ಇಲ್ಲ; ಹಾಗಾದರೆ ‘ರೆಹಮಾನ್’ಗೆ ಇದರಲ್ಲಿ ಅಡಚಣೆ ಏನಿದೆ? ಪ್ರತಿಯೊಬ್ರಿಗೂ ಅವರರವರ ಹೆಸರಿನ ಬಗ್ಗೆ ಹೆಮ್ಮೆ ಇರಬೇಕು. ಹೆಸರನ್ನು ಮರೆಮಾಚುವ ಯಾವುದೇ ಅಗತ್ಯವಿಲ್ಲ. ನಿಮ್ಮ ಕೆಲಸವನ್ನು ನೀವು ಮನಃಪೂರ್ವಕವಾಗಿ ಮಾಡುವುದು ಮಹತ್ವದ್ದಾಗಿದೆ. ನಾವು ನಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದರೆ, ನಾವು ಹಿಂದೂ, ಮುಸ್ಲಿಂ ಅಥವಾ ಇನ್ನಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಯಾರಿಗೂ ಏನೂ ವ್ಯತ್ಯಾಸ ಆಗುವುದಿಲ್ಲ. ಕಾವಡಾ ಯಾತ್ರಾ ಮಾರ್ಗದಲ್ಲಿರುವ ಅಂಗಡಿಗಳ ಮೇಲೆ ಮಾಲೀಕರ ಹೆಸರನ್ನು ಬರೆಯುವ ಉತ್ತರ ಪ್ರದೇಶ ಸರ್ಕಾರದ ಆದೇಶಕ್ಕೆ ಯೋಗಋಷಿ ರಾಮದೇವ್ ಬಾಬಾ ಹೀಗೆ ಪ್ರತಿಕ್ರಿಯಿಸಿದ್ದಾರೆ.