Muslims Attack On Hindus: ಕಾಂಗ್ರೆಸ್ಸಿನ ಮುಸ್ಲಿಂ ಅಭ್ಯರ್ಥಿಯ ವಿಜಯದ ನಂತರ ಹಿಂದೂಗಳ ಮೇಲಿನ ದಾಳಿಯ ಪ್ರಕರಣದಲ್ಲಿ 5 ಮುಸ್ಲಿಮರ ಬಂಧನ

ಮಂಗಲೋರ (ಉತ್ತರಾಖಂಡ) ವಿಧಾನಸಭಾ ಉಪಚುನಾವಣೆ

ಹರಿದ್ವಾರ (ಉತ್ತರಾಖಂಡ) – ಹರಿದ್ವಾರ ಜಿಲ್ಲೆಯ ಹಿಂದೂಬಹುಸಂಖ್ಯಾತ ಮಂಗಲೋರ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಜಿ ಮೊಹಮ್ಮದ ನಿಜಾಮುದ್ದೀನ ಗೆಲುವು ಸಾಧಿಸಿದ್ದಾರೆ. ಈ ವಿಜಯದ ನಂತರ, ಮಂಗಲೋರನಲ್ಲಿ ವಿಜಯದ ಮೆರವಣಿಗೆ ನಡೆಯಿತು, ಅದರಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ಕಾರ್ಯಕರ್ತರು ಹಿಂದೂಗಳ ಮೇಲೆ ದಾಳಿ ನಡೆಸಿದರು. ಈ ಪ್ರಕರಣದಲ್ಲಿ, ಇರ್ಫಾನ್, ಅಬ್ರಾರ್, ಕಾಮಿಲ್, ಶಮ್ಸಾದ್ ಮತ್ತು ಇರ್ಫಾನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಅಪರಾಧಿಗಳನ್ನು ಗುರುತಿಸಲು ಮತ್ತು ಅವರನ್ನು ಬಂಧಿಸಲು ಪೊಲೀಸರು ಹಲವು ಪೊಲೀಸ ಪಡೆಗಳನ್ನು ನೇಮಿಸಿದ್ದಾರೆ. ವಿಧಾನಸಭಾ ಉಪಚುನಾವಣೆಯಲ್ಲಿನ ವಿಜಯದ ನಂತರ, ಕಾಂಗ್ರೆಸ್ ಬೆಂಬಲಿಗರ ಅನುಮತಿಯಿಲ್ಲದೆ ಮೆರವಣಿಗೆ ತೆಗೆದಿದ್ದರು. (ಗಾಂಧಿವಾದಿ ಮತ್ತು ಸಂವಿಧಾನ ಪ್ರೇಮಿ ರಾಹುಲ್ ಗಾಂಧಿಯವರ ಕಾಂಗ್ರೆಸ್ಸಿನ ಇದು ನೈಜ ಸ್ವರೂಪವಾಗಿದೆ ! – ಸಂಪಾದಕರು)

ಕಾಂಗ್ರೆಸ್ ವಿಜಯದ ನಂತರ, ನಮಗೆ ಕಾನೂನ ಮುರಿಯಲು ಪರವಾನಗಿ ಸಿಕ್ಕಿತು ! – ಕಾಜಿ ನಿಜಾಮುದ್ದೀನ್ ಬೆಂಬಲಿಗ

ಹಿಂದುತ್ವನಿಷ್ಠ ಪಕ್ಷದ ಅಭ್ಯರ್ಥಿಯು ಗೆದ್ದಾಗ ಹೀಗೆ ಹೇಳಲಾಗುತ್ತದೆಯೇ ? ಹಿಂದೂ ಕಾರ್ಯಕರ್ತರು ಇದನ್ನು ಎಂದಾದರೂ ಹೀಗೆ ಹೇಳುತ್ತಾರೆಯೇ ? ಆದರೂ ದೇಶದಲ್ಲಿ ಹಿಂದೂಗಳನ್ನು ‘ಭಯೋತ್ಪಾದಕರು’, ‘ತಾಲಿಬಾನಿ’ ಎಂದು ಕರೆಯಲಾಗುತ್ತದೆ ಮತ್ತು ಮತಾಂಧ ಮುಸ್ಲಿಮರನ್ನು ‘ಅಸುರಕ್ಷಿತ’ ಎಂದು ಹೇಳಲಾಗುತ್ತದೆ !
ಖಾಜಿ ನಿಜಾಮುದ್ದೀನ್ ಇವರ ಮುಸ್ಲಿಂ ಬೆಂಬಲಿಗರು ಪ್ರಸಾರ ಮಾಧ್ಯಮದೊಂದಿಗೆ ಮಾತನಾಡುವಾಗ, ನಾವು ಕಾನೂನನ್ನು ಉಲ್ಲಂಘಿಸಲಿದ್ದೇವೆ; ಕಾರಣ, ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿಜಯದ ನಂತರ ಹಾಗೆ ಮಾಡಲು ನಮಗೆ ‘ಅನುಮತಿ’ ಇದೆ. (ಇಂತಹವರ ಶಾಸಕತ್ವವನ್ನು ರದ್ದು ಪಡಿಸಿ ಅವರನ್ನು ಜೈಲಿಗೆ ಕಳುಹಿಸಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಕಾಂಗ್ರೆಸ್ ಜಯಗಳಿಸಿದ ಬಳಿಕ ಹಿಂದೂಗಳಿಗೆ ಅದು ಇಸ್ಲಾಮಿಕ್ ಆಡಳಿತವೇ ಆಗಿರುತ್ತದೆಯೆಂದು ಇದರಿಂದ ಸಾಬೀತಾಗುತ್ತದೆ ! ಆದರೂ ಹಿಂದೂಗಳು ಪದೇ ಪದೇ ಕಾಂಗ್ರೆಸನ್ನು ಗೆಲ್ಲಿಸಿ ಆತ್ಮಘಾತುಕ ಮಾಡಿಕೊಳ್ಳುತ್ತಿದೆ !