Cow killer Beats Gaurakshak: ಮಹಾಡ್‌ನಲ್ಲಿ ಮತಾಂಧರಿಂದ ಪೊಲೀಸರ ಎದುರೇ 4 ಗೋರಕ್ಷಕರ ಮೇಲೆ ದಾಳಿ !

ಒಬ್ಬರಿಗೆ ಗಂಭೀರ ಗಾಯ !

ಮಹಾಡ್ – ಇಲ್ಲಿಯ ಇಸಾನೆ ಕಾಂಬ್ಲೆ ಪ್ರದೇಶದಲ್ಲಿ ಗೋವುಗಳನ್ನು ಕೊಂದವರನ್ನು ಪೊಲೀಸರು ಬಂಧಿಸಿದ್ದಾರೆ. ಆಯಾ ಸ್ಥಳದಲ್ಲಿ ಗೋಹತ್ಯೆ ನಡೆಯುತ್ತದೆ ಎಂಬ ಮಾಹಿತಿ ಪೊಲಾದ್‌ಪುರದ ಗೋರಕ್ಷಕರಿಗೆ ಸಿಕ್ಕಿತ್ತು. ಹೀಗಾಗಿ ಸ್ಥಳಕ್ಕಾಗಮಿಸಿ ಗೋಹತ್ಯೆಕೋರರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಗೋರಕ್ಷಕರ ಜತೆ ಪೊಲೀಸರೂ ಇದ್ದರು; ಆದರೂ ಮತಾಂಧರು ಗೋರಕ್ಷಕರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಲ್ಲಿ ಶ್ರೀ. ನೀಲೇಶ್ ದಾರೆಕರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಸರ್ವಶ್ರೀ ಸುಮಿತ್ ಜಗತಾಪ್, ಜಯೇಶ ದಾರೆಕರ್ ಮತ್ತು ಸಾಗರ್ ಸಾಳುಂಖೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳನ್ನು ಮತಾಂಧರಿಂದ ರಕ್ಷಿಸಲು ಸಾಧ್ಯವಾಗದ ಪೊಲೀಸರು ಎಂದಾದರೂ ಹಿಂದೂಗಳನ್ನು ಭಯೋತ್ಪಾದಕರಿಂದ ರಕ್ಷಿಸಲು ಸಾಧ್ಯವೇ ? ಇಂತಹ ಪೊಲೀಸರನ್ನು ವಜಾಗೊಳಿಸಬೇಕು!