ಬೆಂಗಳೂರಿನಲ್ಲಿ ನೈಜೀರಿಯನ್ ಪ್ರಜೆಗಳಿಂದ ಪೊಲೀಸರ ಮೇಲೆ ಹಲ್ಲೆ

ಬೆಂಗಳೂರು – ನೈಜೀರಿಯಾದ ನಾಗರಿಕರಿಂದ ಮಾಹಿತಿ ಸಂಗ್ರಹಿಸಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಮಾವಳ್ಳಿಪುರದಲ್ಲಿ ಏಪ್ರಿಲ್ 19 ರ ಮಧ್ಯರಾತ್ರಿ ನಡೆದಿದೆ. 4 ಪೊಲೀಸರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೊದಲಿಗೆ ಪೊಲೀಸರು ಮತ್ತು ನೈಜೀರಿಯಾ ಪ್ರಜೆಯ ನಡುವೆ ವಾಗ್ವಾದ ನಡೆಯಿತು. ಅದರ ನಂತರ, ಈ ನಾಗರಿಕರು ತಮ್ಮವರನ್ನು ಫೋನ್‌ನಲ್ಲಿ ಸ್ಥಳಕ್ಕೆ ಕರೆದರು. ಬೈಕ್ ನಲ್ಲಿ ಅಲ್ಲಿಗೆ ತಲುಪಿದಾಗ ಪೊಲೀಸರಿಗೆ ಲಾಠಿ ಪ್ರಹಾರ ಮಾಡಿದ್ದಾರೆ. ಪೊಲೀಸರು ಕಾರಿನಲ್ಲಿ ಓಡಲು ಪ್ರಾರಂಭಿಸಿದಾಗ, ಅವರ ಮೇಲೆ ಕಲ್ಲು ತೂರಲಾಯಿತು. ಈ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.