Iqbal Ansari Attacked : ಬಾಬ್ರಿಯ ಕಕ್ಷಿದಾರನಾಗಿದ್ದ ಇಕ್ಬಾಲ್ ಅನ್ಸಾರಿ ಮೇಲೆ ಮುಸ್ಲಿಮರಿಂದ ದಾಳಿ

ಬಿಜೆಪಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ ದುಷ್ಪರಿಣಾಮ !

ಬಾಬ್ರಿಯ ಕಕ್ಷಿದಾರ ಇಕ್ಬಾಲ್ ಅನ್ಸಾರಿ

ಅಯೋಧ್ಯೆ (ಉತ್ತರ ಪ್ರದೇಶ) – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಯನ್ನು ಹೊಗಳಿದ್ದಕ್ಕೆ ಬಾಬ್ರಿ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ಬೆಲೆ ತೆತ್ತಬೇಕಾಯಿತು. ಅವರು ಸರಕಾರದ ಪರವಾಗಿ ಹೇಳಿಕೆ ನೀಡಿದ ಕಾರಣ ಆಕ್ರೋಶಿತಗೊಂಡ ಮುಸ್ಲಿಮರು ಅವರ ಮೇಲೆ ಹಲ್ಲೆ ನಡೆಸಿದರು. ಶುಕ್ರವಾರ, ಏಪ್ರಿಲ್ 5 ರಂದು, ಅವರು ನಮಾಜ್ ಮಾಡಲು ಮಸೀದಿಗೆ ಹೋದಾಗ, ಅವರ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ದೇವೇಂದ್ರ ಪಾಂಡೆ ಅವರು, ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಇಕ್ಬಾಲ್ ಅನ್ಸಾರಿ ಅವರು ಪ್ರತಿಕ್ರಿಯೆ ನೀಡಿ, ಕೆಲವರಿಗೆ ದೇಶದಲ್ಲಿ ಶಾಂತಿ ಇರಬಾರದು ಎಂಬ ಆಸೆಯಿದೆ. ಇದರಿಂದ ಸಮಾಜದ ವಾತಾವರಣವನ್ನು ಹಾಳು ಮಾಡಲು ದೇಣಿಗೆ ಪಡೆಯುತ್ತಲೇ ಇರುತ್ತಾರೆ. ಅಂತಹವರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.