ಭಾಜಪ ಸಂಸದ ಅನಂತಕುಮಾರ ಹೆಗಡೆ ಪುನಃ ಅದೇ ಸ್ಥಳದಲ್ಲಿ ಶ್ರೀ ಹನುಮಂತನ ಧ್ವಜವನ್ನು ಹಾರಿಸಿದರು !

ಭಟ್ಕಳದಲ್ಲಿ ಧ್ವಜಸ್ತಂಭವನ್ನು ಧ್ವಂಸಗೊಳಿಸಿದ ಪ್ರಕರಣ

ಭಟ್ಕಳ – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಗುಂಡಿ ಗ್ರಾಮದಲ್ಲಿ ಭಾಜಪ ಸಂಸದ ಅನಂತಕುಮಾರ ಹೆಗಡೆ ಇವರು ಶ್ರೀ ಹನುಮಾನ್ ಧ್ವಜವನ್ನು ಪುನಃ ಹಾರಿಸಿದರು ಮತ್ತು ವೀರ ಸಾವರ್ಕರ ಅವರ ಫಲಕವನ್ನು ಪುನಃ ಹಚ್ಚಿದರು. ಗುಂಡಿ ಗ್ರಾಮದಲ್ಲಿರುವ ಧ್ವಜಸ್ತಂಭವನ್ನು ಕೆಡವಲಾಗಿತ್ತು. ಹಾಗೆಯೇ ವೀರ ಸಾವರ್ಕರ ಅವರ ಫಲಕವನ್ನು ತೆಗೆದುಹಾಕಲಾಗಿತ್ತು. ಸ್ಥಳೀಯ ಹಿಂದೂ ಕಾರ್ಯಕರ್ತರು ಭಾರೀ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಭಾಜಪ ಸಂಸದ ಅನಂತಕುಮಾರ ಹೆಗಡೆ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ಟೆಂಗಿನಗುಂಡಿ ಗ್ರಾಮಕ್ಕೆ ತೆರಳಿದ್ದರು. ಆ ಸಮಯದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆಯೆಂದು ಹೇಳಿ ಗ್ರಾಮದ ಧ್ವಜಸ್ತಂಭವನ್ನು ಕೆಡವಿ ವೀರ ಸಾವರ್ಕರ ಅವರ ಫಲಕವನ್ನು ತೆಗೆದುಹಾಕಿರುವುದು ಅವರ ಗಮನಕ್ಕೆ ಬಂದಿತು. ತದನಂತರ ಅವರು ಈ ಕೃತಿಯನ್ನು ಮಾಡಿದರು.