ಭಯೋತ್ಪಾದಕರಿಂದ ಭಿವಂಡಿಯ ‘ಪಡಘಾ’ ಗ್ರಾಮವನ್ನು ‘ಅಲ್ ಶಾಮ್’ ಎಂದು ಘೋಷಣೆ !

(‘ಅಲ್ ಶಾಮ್’ ಎಂದರೆ ‘ದಿ ಫ್ರೀ ಝೋನ್’)

ಭಯೋತ್ಪಾದಕ ಸಂಘಟನೆಗೆ ನಿಷ್ಠರಾಗಿರಲು ಖಲೀಫಾದಿಂದ ಯುವಕರಿಗೆ ಪ್ರತಿಜ್ಞೆ !

ಭಯೋತ್ಪಾದಕರು ಹಿಂದೂ ಬಹುಸಂಖ್ಯಾತ ಭಾರತದಲ್ಲಿನ ಹಳ್ಳಿಗೆ ಇಸ್ಲಾಮಿಕ್ ಹೆಸರನ್ನು ಇಡುವುದು ಹಿಂದೂಗಳಿಗೆ ಎಚ್ಚರಿಕೆಯ ಗಂಟೆ !

ಠಾಣೆ – ರಾಷ್ಟ್ರೀಯ ತನಿಖಾ ದಳವು ಡಿಸೆಂಬರ್ 9 ರಂದು ನಡೆಸಿದ ದಾಳಿಯಲ್ಲಿ 15 ಜನರನ್ನು ಬಂಧಿಸಿದೆ. ಈ ಆರೋಪಿಗಳಲ್ಲಿ ಭಯೋತ್ಪಾದಕ ಸಂಘಟನೆ ‘ಐಸಿಸ್’ನ ನಾಯಕನೂ ಸೇರಿದ್ದಾನೆ. ಸಾಕಿಬ್ ನಾಚನ್ ಇವನು ‘ಬಯಾಥ’ನ ಇತರ ಸದಸ್ಯರಿಗೆ ಅಂದರೆ ಸಂಘಟನೆಗೆ ನಿಷ್ಠೆಯಿಂದ ಇರಲು ಪ್ರತಿಜ್ಞೆ ನೀಡಿದ್ದ. ಆತ ಭಿವಂಡಿಯ ಪಡಘಾ ಗ್ರಾಮದ ‘ಖಲೀಫಾ’ ಆಗಿದ್ದ. ಇವರೆಲ್ಲರೂ ಸೇರಿ ಪಡಘಾ ಗ್ರಾಮವನ್ನು ‘ಅಲ್ ಶಾಮ್’ ಅಂದರೆ ‘ಮುಕ್ತ ವಲಯ’ ಎಂದು ಘೋಷಿಸಿದ್ದರು. ಪಡಘಾದಲ್ಲಿ ದೊಡ್ಡ ಐಸಿಸ್ ಜಾಲವನ್ನು ನಿರ್ಮಿಸಲು ಪ್ರಭಾವಿ ಮುಸ್ಲಿಂ ಯುವಕರು ತಮ್ಮ ಮನೆಗಳನ್ನು ತೊರೆದು ಇಲ್ಲಿಗೆ ಬರುವಂತೆ ಪ್ರೋತ್ಸಾಹಿಸುತ್ತಿದ್ದ.

ಸಂಪಾದಕರ ನಿಲುವು

* ಹೆಚ್ಚುತ್ತಿರುವ ಭಯೋತ್ಪಾದನೆಯ ಹಾವಳಿಯನ್ನು ಗಮನಿಸಿದರೆ, ದೇಶದ ಇತರ ಹಳ್ಳಿಗಳಿಗೆ ಇಸ್ಲಾಮಿಕ್ ಹೆಸರಿಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ! ಹಿಂದೂಗಳೇ ಇದನ್ನು ಗಮನದಲ್ಲಿಟ್ಟುಕೊಂಡು ಈಗಲೇ ಸಂಘಟಿತರಾಗಿ !