ಪ್ರಖರ ಹಿಂದುತ್ವನಿಷ್ಠ ಟಿ. ರಾಜಾ ಸಿಂಗ್ ಅವರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಸನ್ಮಾನ !

ಶ್ರೀ. ಟಿ. ರಾಜಾ ಸಿಂಗ್‌ಗೆ ಉಡುಗೊರೆಗಳನ್ನು ನೀಡುವಾಗ, ಶ್ರೀ. ಚೇತನ ಗಾಡಿ

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಗೋಶಾಮಹಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಖರ ಹಿಂದುತ್ವನಿಷ್ಠ ಟಿ. ರಾಜಾ ಸಿಂಗ್ ಇವರು 80 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಟಿ. ರಾಜಾ ಸಿಂಗ್ ಇಲ್ಲಿಂದ ಮೂರನೇ ಬಾರಿಗೆ ಗೆದ್ದಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ತೆಲಂಗಾಣ ರಾಜ್ಯ ಸಮನ್ವಯಕ ಶ್ರೀ. ಚೇತನ್ ಗಾಡಿ ಅವರಿಂದ ಟಿ. ರಾಜಾ ಸಿಂಗ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಇತರೆ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ನಿಟ್ಟಿನಲ್ಲಿ ‘ಸನಾತನ ಪ್ರಭಾತ್’ ಕೂಡ ತನ್ನ ಅಧಿಕೃತ ‘ಎಕ್ಸ್’ ಖಾತೆಯಿಂದ ಡಿಸೆಂಬರ್ 3 ರ ಸಂಜೆ ಟಿ. ರಾಜಾ ಸಿಂಗ್ ಅವರಿಗೆ ಅಭಿನಂದನೆ ವ್ಯಕ್ತಪಡಿಸಿದೆ. ‘ತೆಲಂಗಾಣದ ಅತ್ಯಂತ ಪ್ರತಿಕೂಲ ವಾತಾವರಣದಲ್ಲಿಯೂ ಸಹ, ಪ್ರಖರ ಹಿಂದುತ್ವನಿಷ್ಠ ನಾಯಕ ಮತ್ತು ಬಿಜೆಪಿ ಅಭ್ಯರ್ಥಿ ಟಿ. ರಾಜಾ ಸಿಂಗ್ ಮತ್ತೊಮ್ಮೆ ವಿಜಯಿಯಾಗಿದ್ದಾರೆ. ಅವರಿಗೆ 80 ಸಾವಿರದ 182 ಮತಗಳು ಸಿಕ್ಕಿದೆ ಮತ್ತು ಬಿ.ಆರ್.ಎಸ್. ಅಭ್ಯರ್ಥಿ 58 ಸಾವಿರದ 725 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಕೇವಲ 6 ಸಾವಿರದ 265 ಮತಗಳಿಗೆ ತೃಪ್ತಿಪಡಬೇಕಾಯಿತು. ರಾಜಾ ಭಯ್ಯಾ ಅವರಿಗೆ ಅಭಿನಂದನೆಗಳು !’ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.