ಛತ್ತಿಸಗಡದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ವಾಜಿಉದ್ದಿನ್ ನ ಬಂಧನ 

ಲಕ್ಷ್ಮಣಪುರಿ (ಉತ್ತರಪ್ರದೇಶ ) – ಉತ್ತರಪ್ರದೇಶ ಪೊಲೀಸರ ಉಗ್ರ ನಿಗ್ರಹ ದಳವು ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ವಾಜಿಉದ್ದೀನ ಇವನನ್ನು ಛತ್ತೀಸ್ಗಡದ ದುರ್ಗದಿಂದ ಇತ್ತೀಚೆಗೆ ಬಂಧಿಸಿದೆ. ವಾಜಿಉದ್ದಿನ್ ಇವನು ಅಲಿಗಡ್ ಮುಸ್ಲಿಂ ವಿದ್ಯಾಪೀಠದಲ್ಲಿ ಪಿ ಎಚ್ ಡಿ ವಿದ್ಯಾರ್ಥಿ ಆಗಿದ್ದಾನೆ. ಉಗ್ರ ನಿಗ್ರಹ ದಳಕ್ಕೆ ವಾಜಿಉದ್ದಿನನ ಮೊಬೈಲ್ ನಿಂದ ಪ್ರಚೋದನಕಾರಿ ಮತ್ತು ಭಯೋತ್ಪಾದಕ ಲೇಖನಗಳು ದೊರೆತಿವೆ. ಈಗ ಅವನನ್ನು ಟ್ರಾನ್ಝಿಂಟ್ ರಿಮಾಂಡ್ ನಲ್ಲಿ ದುರ್ಗದಿಂದ ಲಕ್ಷ್ಮಣಪುರಿಗೆ ಕರೆ ತರಲಾಗಿದೆ. ಇಲ್ಲಿ ಅವನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಪೊಲೀಸ್ ಕೊಠಡಿ ನೀಡಬೇಕೆಂದು ಬೇಡಿಕೆ ಸಲ್ಲಿಸಲಾಗಿದೆ. ಕೆಲವು ದಿನಗಳ ಹಿಂದೆ ಉತ್ತರಪ್ರದೇಶ ಪೊಲೀಸರ ಉಗ್ರ ನಿಗ್ರಹ ದಳವು ಅಲಿಗಡ್ ಮುಸ್ಲಿಂ ವಿದ್ಯಾಪೀಠಕ್ಕೆ ಸಂಬಂಧಿಸಿದ ಅಬ್ದುಲ್ಲ ಅರ್ಶಲಾನ್ ಮತ್ತು ಮಾಜ್ ಬಿನ್ ತಾರಿಕ್ ಇವರಿಬ್ಬರನ್ನು ಬಂಧಿಸಿತ್ತು. ಇವರಿಬ್ಬರೂ ಇಸ್ಲಾಮಿಕ್ ಸ್ಟೇಟ್ ನ ವಿಚಾರಧಾರೆಯಿಂದ ಪ್ರೇರಿತರಾಗಿದ್ದಾರೆ, ವಾಜಿಉದ್ದಿನ್, ಅಬ್ದುಲ್ಲಾ ಆರ್ಶಲಾನ್ ಮತ್ತು ಮಾಜ್ ಬಿನ್ ತಾರಿಕ್ ಇವರು ಭಯೋತ್ಪಾದಕ ಪುಣೆ ಇಸ್ಲಾಮಿಕ್ ಸ್ಟೇಟ್ ತಂಡದ ಜೊತೆಗೆ ಜೋಡಣೆಯಾಗಿದ್ದಾರೆ.

ಅಬ್ದುಲ್ಲಾ ಮತ್ತು ಶಹಜವಾಜ್ ಇವರ ಪತ್ನಿಯರು ಹಿಂದೂ

ಕಳೆದ ೨ ತಿಂಗಳಲ್ಲಿ ಅಲಿಗಡ್ ಮುಸ್ಲಿಂ ವಿದ್ಯಾಪೀಠದಿಂದ ಬಂಧಿಸಲಾಗಿರುವ ೨ ಭಯೋತ್ಪಾದಕರು ಹಿಂದೂ ಹುಡುಗಿಯರ ಜೊತೆಗೆ ವಿವಾಹ ಮಾಡಿಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ದೆಹಲಿ ಪೊಲೀಸರು ಬಂಧಿಸಿರುವ ಭಯೋತ್ಪಾದಕ ಶಹನವಾಜನು ೨೦೨೧ ರಲ್ಲಿ ಓರ್ವ ಹಿಂದೂ ಹುಡುಗಿಯ ಜೊತೆಗೆ ವಿವಾಹ ಮಾಡಿಕೊಂಡಿದ್ದಾನೆ. ಭಯೋತ್ಪಾದಕ ಅಬ್ದುಲ್ಲ ಅರ್ಶಲಾನ್ ಇವನು ಕೂಡ ಹಿಂದೂ ಹುಡುಗಿಯ ಜೊತೆಗೆ ವಿವಾಹ ಮಾಡಿಕೊಂಡಿದ್ದಾನೆ .