ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ ಸಾವಿರಾರು ಮುಸ್ಲಿಮರು ನಮ್ಮ ಕಾರಿಗೆ ಮುತ್ತಿಗೆ ಹಾಕಿದ್ದರು!

  • ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರು ಹೇಳಿದ ನೆನಪುಗಳು

  • ಇತಿಹಾಸಕಾರ ವಿಕ್ರಮ ಸಂಪತ ಅವರ ಮುಂಬರುವ ಪುಸ್ತಕಗಳಲ್ಲಿ ಈ ನೆನಪುಗಳು ಶಬ್ದಬದ್ಧವಾಗಿರಲಿವೆ!

ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಮತ್ತು ಅವರ ತಂದೆ ಸುಪ್ರೀಂ ಕೋರ್ಟ್ ಹಿರಿಯ (ನ್ಯಾಯವಾದಿ) ಪೂಜ್ಯ ಹರಿ ಶಂಕರ್ ಜೈನ್

ವಾರಣಾಸಿ – ನ್ಯಾಯಾಲಯದ ಆದೇಶದಂತೆ ವಿವಾದಿತ ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ, ನಾನು ಮತ್ತು ನನ್ನ ತಂದೆ ಯವರಾದ, ಸರ್ವೋಚ್ಚ ನ್ಯಾಯಾಲಯದ ಹಿರಿಯ (ನ್ಯಾಯವಾದಿ) ಪೂ. ಹರಿ ಶಂಕರ ಜೈನ ಇವರು 2022 ರಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಜ್ಞಾನವಾಪಿ ಸಮೀಕ್ಷೆಯನ್ನು ವಿರೋಧಿಸಿ 50 ರಿಂದ 60 ಸಾವಿರ ಮುಸ್ಲಿಮರು ತಂದೆಯವರ ಕಾರಿಗೆ ಮುತ್ತಿಗೆ ಹಾಕಿದ್ದರು ಮತ್ತು ಆಗ ನಾನು ಅಸಹಾಯಕನಾಗಿದ್ದೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ಇವರು ಜ್ಞಾನವಾಪಿ ವಿಚಾರಣೆಗೆ ಹೋದಾಗಿನ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಹೇಳಿದರು.

ಜ್ಞಾನವಾಪಿ ವಿಚಾರಣೆಯ ಸಂದರ್ಭದಲ್ಲಿ ವಕೀಲ ವಿಷ್ಣು ಶಂಕರ್ ಜೈನ್ ಅವರು ತಮಗಾದ ಕಹಿ ಅನುಭವಗಳನ್ನು ಇತಿಹಾಸಕಾರ ವಿಕ್ರಮ್ ಸಂಪತ್ ಅವರು ತಮ್ಮ ಮುಂಬರುವ ಕಾಶಿ ಮೇಲಿನ ಮುಂಬರುವ ಪುಸ್ತಕದಲ್ಲಿ ವಿವರಿಸಲಿದ್ದಾರೆ. ಆನಂದ್ ರಂಗನಾಥನ್ ಅವರು ನವೆಂಬರ್ 5 ರಂದು ‘X’ (ಹಿಂದೆ ಟ್ವಿಟರ್) ನಲ್ಲಿ ಸಂದರ್ಶನದ ಒಂದು ಭಾಗವನ್ನು ಪ್ರಸಾರ ಮಾಡಿದರು. ಕಾಶಿ ವಿಶ್ವನಾಥ ಮಂದಿರ –ಜ್ಞಾನವಾಪಿ ಸಂಬಂಧಿತ ಖಟ್ಲೆಯ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಮತ್ತು ಅವರ ತಂದೆ ಸುಪ್ರೀಂ ಕೋರ್ಟ್ ಹಿರಿಯ (ನ್ಯಾಯವಾದಿ) ಪೂಜ್ಯ ಹರಿ ಶಂಕರ್ ಜೈನ್ ಇವರು ಹಿಂದೂ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ ವಾರಣಾಸಿಯ ವಿವಾದಿತ ಜ್ಞಾನವಾಪಿ ಸಮೀಕ್ಷೆ ಮತ್ತು ಚಿತ್ರೀಕರಣವನ್ನು ನಡೆಸಿದ ದಿನದ ವಿವರವಾದ ಘಟನಾಕ್ರಮಗಳನ್ನು ವಿವರಿಸಿದ ನ್ಯಾಯವಾದಿ ವಿಷ್ಣು ಶಂಕರ್ ಜೈನ್, “ಆ ದಿನದ ನೆನಪುಗಳು ಅವರ ಹೃದಯದಲ್ಲಿ ಆಳವಾಗಿ ಕೊರೆಯಲ್ಪಟ್ಟಿದೆ. ಅದು ಮೇ 5 ಅಥವಾ 6, 2022 ಆಗಿತ್ತು. ಅಂದು ‘ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ’ಯ ಕಾರ್ಯದರ್ಶಿಯವರು ಜ್ಞಾನವಾಪಿ ಸಮೀಕ್ಷೆ ಹಾಗೂ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಅವರು ನೀಡಿದ ಕರೆಯ ಮೇರೆಗೆ 50 ರಿಂದ 60 ಸಾವಿರ ಮುಸ್ಲಿಮರು ಬೀದಿಗಿಳಿದು ವಾರಣಾಸಿಯ ಶ್ರೀ ಕಾಶಿ ವಿಶ್ವನಾಥ ದೇವಾಲಯದ ಪ್ರವೇಶ ಸಂಖ್ಯೆ 4 ರವರೆಗಿನ ಎಲ್ಲಾ ರಸ್ತೆಗಳನ್ನು ತಡೆದರು. ಅವರು ಸ್ಕಲ್ ಕ್ಯಾಪುಗಳನ್ನು ಧರಿಸಿದ್ದರು ಮತ್ತು ವಿಶಿಷ್ಟ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿದ್ದರು. ನಾನು ಮತ್ತು ನನ್ನ ತಂದೆ ಕಾರಿನಲ್ಲಿ 4 ನೇ ಗೇಟ್ಗೆ ಹೋಗುತ್ತಿದ್ದೆವು. ಒಂದು ಕ್ಷಣ ನಮಗೆ, ‘ನಾವು ಎಂದಿಗೂ ಜ್ಞಾನವಾಪಿಯನ್ನು ತಲುಪುವುದಿಲ್ಲ. ನಮ್ಮ ಮೇಲೆ ದಾಳಿ ನಡೆಯುವುದು ಮತ್ತು ನಮಗೆ ಗೇಟ್ ಸಂಖ್ಯೆ 4ರ ವರೆಗೆ ತಲುಪಲು ಬಿಡುವುದಿಲ್ಲ.’ಎಂದು ಅನಿಸಿತು. ಆ ಸಮಯದಲ್ಲಿ ನಾನು ಅಸಹಾಯಕತೆಯಿಂದ ನನ್ನ ತಂದೆಯತ್ತ ನೋಡಿದೆ. ಅವರು ನನಗೆ ಬಹಳ ಶಾಂತವಾಗಿ ಸತ್ತೋ ಅಥವಾ ಬದುಕಿದ್ದೋ ನಮ್ಮ ಮಹಾದೇವನನ್ನು ಭೇಟಿಯಾಗಲಿದ್ದೇವೆ. ಆದ್ದರಿಂದ ಮುಂದುವರಿಯೋಣ ಎಂದು ಹೇಳಿದರು. ಅದು ನನಗೆ ಸ್ಫೂರ್ತಿಯಾಯಿತು.” ಕೆಲವು ದಿನಗಳ ನಂತರ, ಜ್ಞಾನವಾಪಿ ಪ್ರದೇಶದಲ್ಲಿ ಶಿವಲಿಂಗ ಮಾತ್ರವಲ್ಲ, ಆದರೆ ಆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಸಮೀಕ್ಷಾ ತಂಡಕ್ಕೆ ಸ್ವಸ್ತಿಕ, ನಂದಿ ಮತ್ತು ಜ್ಞಾನವಾಪಿಯ ಗೋಡೆಯ ಮೇಲೆ ಕಮಲಗಳಲ್ಲಿ ಅನೇಕ ಹಿಂದೂ ದೇವತೆಗಳ ಅನೇಕ ಆಕೃತಿಗಳನ್ನು ಕಂಡುಬಂದವು ಎಂದು ಅವರು ಹೇಳಿದರು.

ನ್ಯಾಯಾಲಯದಿಂದ ಜ್ಞಾನವಾಪಿ ಸಮೀಕ್ಷೆ ನಿಲ್ಲಿಸಲು ಆದೇಶ!

ಮುಸ್ಲಿಂ ಜನರು ಜ್ಞಾನವಾಪಿ ಸಮೀಕ್ಷಾ ತಂಡವನ್ನು ಒಳಗೆ ಪ್ರವೇಶಿಸದಂತೆ ತಡೆದ ಕಾರಣ ನ್ಯಾಯಾಲಯವು ಜ್ಞಾನವಾಪಿ ಸಮೀಕ್ಷೆಯನ್ನು ನಿಲ್ಲಿಸಲು ಆದೇಶಿಸಿತು. ವಾರಣಾಸಿಯಲ್ಲಿ ಒಂದು ದಿನಕ್ಕಾಗಿ ಸಮೀಕ್ಷೆಯನ್ನು ಸ್ಥಗಿತಗೊಳಿಸಿದ ನಂತರ, ಸಮೀಕ್ಷಾ ತಂಡದೊಂದಿಗೆ ಬಂದಿದ್ದ ಒಬ್ಬ ವಿಡಿಯೊಗ್ರಾಫರ್ ಸ್ವಸ್ತಿಕ, ನಂದಿ ಮತ್ತು ಕಮಲದ ಚಿತ್ರಗಳನ್ನು ಹೊಂದಿರುವ ಹಿಂದೂ ದೇವತೆಗಳ ಚಿತ್ರಗಳು ಇದೆಯೆಂದು ಬಹಿರಂಗಪಡಿಸಿದರು. ಬಳಿಕ ಮೇ 16ರಂದು ಸರ್ವೆ ನಡೆಸಲಾಯಿತು ಮತ್ತು, ಜ್ಞಾನವಾಪಿ ವಾಸ್ತುವಿನಲ್ಲಿ ಶಿವಲಿಂಗ ಪತ್ತೆಯಾಗಿದೆ. ಮೇ 16 ರಂದು, ಜ್ಞಾನವಾಪಿ ವಾಸ್ತುವಿನಲ್ಲಿ ಶಿವಲಿಂಗ ಕಂಡುಬಂದ ನಂತರ ಸರ್ವೋಚ್ಚ ನ್ಯಾಯಾಲಯವು ವಾರಣಾಸಿಯ ಜಿಲ್ಲಾ ದಂಡಾಧಿಕಾರಿಗಳಿಗೆ ಪವಿತ್ರ ವಾಸ್ತುವನ್ನು ಸಂರಕ್ಷಿಸುವಂತೆ ನಿರ್ದೇಶನ ನೀಡಿತು. ಅಲಹಾಬಾದ್ ಉಚ್ಚ ನ್ಯಾಯಾಲಯವು 3 ಆಗಸ್ಟ್ 2023 ರಂದು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯು ನಡೆಸುತ್ತಿರುವ ಜ್ಞಾನವಾಪಿಯ ಸಮೀಕ್ಷೆಗೆ ಸವಾಲನ್ನೊಡ್ಡುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸಿತು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣೆಗೆ ಅನುಮತಿ ನೀಡಿತು.