`ಒಂದು ವೇಳೆ ಪ್ರಧಾನಮಂತ್ರಿ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದರೆ, ಅವರು ರಾಜೀನಾಮೆ ನೀಡಬೇಕಂತೆ !’ – ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್

ವಿಷಕಕ್ಕಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ 

ಭೋಪಾಲ (ಮಧ್ಯಪ್ರದೇಶ) – ಭಾರತೀಯ ಸಂವಿಧಾನದ ಆಧಾರದ ಮೇಲೆ ದೇಶವು ನಡೆಯಬೇಕು. ಇಂದು ಸಂವಿಧಾನದ ಪ್ರಮಾಣ ವಚನ ಸ್ವೀಕರಿಸುತ್ತಿರುವ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ (ಶಿವರಾಜ್ ಸಿಂಗ್ ಚೌಹಾಣ್) ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಇವರು ವಿಷ ಕಾರಿದರು.

ಅ. ಈ ಬಾರಿ ಬಜರಂಗದಳವನ್ನು ನಿಷೇಧಿಸಲಾಗುವುದೇ, ಎಂಬ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿದ ಸಿಂಗ್ ಇವರು, ಬಜರಂಗದಳವನ್ನು ನಿಷೇಧಿಸುವುದಿಲ್ಲ; ಏಕೆಂದರೆ ಅದರಲ್ಲಿ ಕೆಲವು ಒಳ್ಳೆಯ ಜನರಿದ್ದಾರೆ; ಆದರೆ ಗಲಭೆಗಳನ್ನು ಪ್ರಚೋದಿಸುವ ಜನರನ್ನು ಬಿಡುವುದಿಲ್ಲ ! ಎಂದು ಹೇಳಿದರು !
ಆ. ಆಗಸ್ಟ್ 15 ರಂದು, ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಂಗ್ ಮಾತನಾಡಿ, ಯಾವುದೇ ರೀತಿಯ ಮೃದು ಮತ್ತು ಕಠಿಣ ಹಿಂದುತ್ವ ಇರಲು ಸಾಧ್ಯವಿಲ್ಲ. ಹಿಂದುತ್ವವನ್ನು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಇವರು ನಿರ್ಮಿಸಿದ್ದರು. ಹಿಂದುತ್ವದ ಹಿಂದೂ ಅಥವಾ ಸನಾತನ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ. (ದಿಗ್ವಿಜಯ್ ಸಿಂಗ್ ರ ವಿಚಿತ್ರ ಸಂಶೋಧನೆ) ! – ಸಂಪಾದಕರು)

(ಸೌಜನ್ಯ – CNN-News18)

ಸಂಪಾದಕೀಯ ನಿಲುವು

ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಗೆ ‘ಓಸಾಮಾಜಿ’ ಎಂದು ಕರೆಯುವ ಮತ್ತು ಯಾಕೂಬ್ ಮೆಮನ್ ನಂತಹ ಭಯೋತ್ಪಾದಕರಿಗೆ ಕಣ್ಣೀರು ಹಾಕುವ ದಿಗ್ವಿಜಯ್ ಸಿಂಗ್ ಅವರಿಂದ ಇಂತಹ ಹೇಳಿಕೆಗಳನ್ನು ನೀಡಿರುವುದರಲ್ಲಿ ಅಚ್ಚರಿಯೇನು ?

ಭಾರತದ ಸಂವಿಧಾನವನ್ನು ಬರೆಯುವಾಗ ಕಾಂಗ್ರೆಸ್ ಭಾರತವನ್ನು ‘ಹಿಂದೂ ರಾಷ್ಟ್ರ’ ಆಗಲು ಬಿಡಲಿಲ್ಲ. ಈ ಪಾಪವನ್ನು ಇಂದು ಯಾರಾದರೂ ಸುಧಾರಿಸಲು ಪ್ರಯತ್ನಿಸಿದರೆ ಹಿಂದೂ ದ್ವೇಷದಿಂದ ಕಾಮಾಲೆಯಾದವರ ಹೊಟ್ಟೆಯಲ್ಲಿ ನೋವಾಗದೇ ಇರದು !