ಅಮೃತಸರದಲ್ಲಿ ದುಷ್ಕರ್ಮಿಗಳಿಂದ ಭಾಜಪದ ನಾಯಕನ ಮೇಲೆ ಮಾರಣಾಂತಿಕ ಹಲ್ಲೆ !

ಪಂಜಾಬದಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ !

ಅಮೃತಸರ (ಪಂಜಾಬ) – ಓರ್ವ ದುಷ್ಕರ್ಮಿ ದಾಳಿಕೋರನು ಭಾಜಪದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಭಾಗದ ಮಹಾಸಚಿವ ಬಲವಿಂದರ ಗಿಲ ಇವರ ಅವರ ಮನೆಯ ಹೊರಗೆ ಅವರ ಮೇಲೆ ಗುಂಡಿನ ದಾಳಿ ಮಾಡಿದರು. ಈ ಸಮಯದಲ್ಲಿ ಗಿಲ ಇವರ ದವಡೆಗೆ ಗುಂಡು ತಾಗಿದ್ದು ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಗುಂಡಿನ ದಾಳಿ ನಡೆಸಿದವನು ಘಟನಾಸ್ಥಳದಿಂದ ತಕ್ಷಣ ಪರಾರಿಯಾಗಿದ್ದಾನೆ. ಅವನ ಜೊತೆಗೆ ಇನ್ನೊಬ್ಬ ವ್ಯಕ್ತಿ ಕೂಡ ಇದ್ದನು. ಈ ಘಟನೆ ಅಮೃತಸರದಿಂದ ೨೫ ಕಿಲೋಮೀಟರ್ ದೂರ ಇರುವ ಜಂಡಿಯಾಲ ಗುರು ಇಲ್ಲಿ ನಡೆದಿದೆ.

ಪೊಲೀಸ ಅಧಿಕಾರಿ ಜುಗರಾಜ ಸಿಂಹ ಇವರು, ಈ ಘಟನೆಯ ತನಿಖೆ ನಡೆಸುವುದಕ್ಕಾಗಿ ಪೊಲೀಸರ ಅನೇಕ ತಂಡಗಳನ್ನು ಸಿದ್ಧಗೊಳಿಸಿದ್ದು ಅವರಿಗೆ ಘಟನಾ ಸ್ಥಳದಲ್ಲಿ ವಿವಿಧ ಸಾಕ್ಷಿಗಳು ದೊರೆತಿವೆ ಎಂದು ಹೇಳಿದರು.