ಕೆ. ಎಸ್. ಈಶ್ವರಪ್ಪ ಇವರಿಗೆ ಕೊಲೆ ಬೆದರಿಕೆ

ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್. ಪೂಜಾರ ಅಲಿಯಾಸ್ ಶಾಹಿರ್ ಶೇಖ್ ಕೊಲೆಗೆ ಸಂಚು – ಕೆ. ಎಸ್. ಈಶ್ವರಪ್ಪ ಆರೋಪ

ಕೆ. ಎಸ್. ಈಶ್ವರಪ್ಪ

ಬಳ್ಳಾರಿ : ಪೊಲೀಸರು ತನಿಖೆಯ ವಿಚಾರದಲ್ಲಿ ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್.ಪೂಜಾರ ಅಲಿಯಾಸ್ ಶಾಹಿರ್ ಶೇಖ್ ನನ್ನು ಬಂಧಿಸಿದ್ದಾರೆ. ಈತ ಕೊಲೆಗೆ ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ ಎಂದು ಭಾಜಪ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ಕೇಳಿ ನನಗೆ ಆಘಾತವಾಯಿತು. ಈತನೇ ಈ ಹಿಂದೆ ನಿತಿನ್ ಗಡ್ಕರಿ ಅವರ ಕೊಲೆಗೆ ಸಂಚು ರೂಪಿಸಿದ್ದ, ಎಂದು ಹೇಳಿದರು. ಈ ಹಿಂದೆಯೂ ನಾನು ಹಿಂದುತ್ವದ ಬಗ್ಗೆ ಮಾತಾಡಿದಾಗ ನನಗೆ ಕೊಲೆ ಬೆದರಿಕೆ ಬಂದಿತ್ತು. ಈ ವಿಷಯ ಸದನದಲ್ಲಿ ತಿಳಿಸಿದಾಗ. ಸಿದ್ದರಾಮಯ್ಯ ನೇತೃತ್ವದ ಸರಕಾರ ಇತ್ತು. ಆಗ ಭದ್ರತೆ ನೀಡಿದ್ದರು. ಕೊಲೆಯ ಸಂಚಿನ ಹಿಂದಿರುವ ಕಾರಣ ಸ್ಪಷ್ಟವಾಗಿಲ್ಲ. ಹಿಂದುತ್ವಕ್ಕಾಗಿ ಈ ಸಂಚು ರೂಪಿಸಿದ್ದರೆ ನಾವು ಹೆದರುವವರಲ್ಲ ಎಂದರು. (ಬಹುಸಂಖ್ಯಾತವಿರುವ ಭಾರತದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದರೇ ಕೊಲೆ ಬೆದರಿಕೆ ಸಿಗುತ್ತದೆ ಇದು ದುರದೃಷ್ಟಕರವಾಗಿದೆ – ಸಂಪಾದಕರು)