‘ದೇವಸ್ಥಾನಗಳನ್ನು ಬ್ರಾಹ್ಮಣ ಮುಕ್ತಗೊಳಿಸುವ ಸಮಯ ಬಂದಿದೆ !’ (ಅಂತೆ)

ಮರಾಠಾ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಖೆಡೆಕರ ಇವರ ಬ್ರಾಹ್ಮಣ ದ್ವೇಷಿ ಹೇಳಿಕೆ !

ಛತ್ರಪತಿ ಶಾಹು ಮಹಾರಾಜರ ವಂಶಸ್ಥ ಸೌ. ಸಂಯೋಗಿತಾರಾಜೆ ಭೋಸಲೆ ಮತ್ತು ಸಂಘದ ಅಧ್ಯಕ್ಷ ಪುರುಷೋತ್ತಮ

ಬುಲಢಾಣ – ಕಾಳಾರಾಮ ದೇವಸ್ಥಾನದಲ್ಲಿ ಛತ್ರಪತಿ ಶಾಹು ಮಹಾರಾಜರ ವಂಶಸ್ಥ ಸೌ. ಸಂಯೋಗಿತಾರಾಜೆ ಭೋಸಲೆ ಇವರ ಜೊತೆ ನಡೆದಿರುವ ರೀತಿ ಮರಾಠ ಸೇವಾ ಸಂಘ ಖಂಡಿಸುತ್ತದೆ. ಈಗ ದೇವಸ್ಥಾನಗಳು ಬ್ರಾಹ್ಮಣ ಮುಕ್ತಗೊಳಿಸುವ ಸಮಯ ಬಂದಿದೆ. ಬ್ರಾಹ್ಮಣರ ಬದಲು ದೇವಸ್ಥಾನದಲ್ಲಿ ಬಹುಜನ ಸಮಾಜದಲ್ಲಿನ ಹುಡುಗ ಹುಡುಗಿಯರನ್ನು ನೇಮಕಗೊಳಿಸಬೇಕು, ಎಂದು ಸಂಘದ ಅಧ್ಯಕ್ಷ ಪುರುಷೋತ್ತಮ ಖೆಡೆಕರ ಇವರು ಹೇಳಿಕೆ ನೀಡಿದರು.(ದೇವಸ್ಥಾನದಲ್ಲಿ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಎಲ್ಲಾ ವಿಧಿ ವಿಧಾನ ಶಾಸ್ತ್ರೋಕ್ತ ಪದ್ದತಿಯಿಂದ ನಡೆಸಲಾಗುತ್ತಿದ್ದು ಈ ರೀತಿಯ ಹೇಳಿಕೆ ನೀಡಿ ಪುರುಷೋತ್ತಮ ಖೆಡೆಕರ ಜಾತಿಯ ದ್ವೇಷ ಪಸರಿಸಿ ಹಿಂದೂಗಳಲ್ಲಿ ಬಿರುಕು ಮೂಡಿಸುವ ದುಷ್ಕೃತ್ಯ ಮಾಡುತ್ತಿದ್ದಾರೆ ! – ಸಂಪಾದಕರು)

‘ಎಲ್ಲಾ ದೇವಸ್ಥಾನಗಳನ್ನು ಭಟ್ ಮುಕ್ತಗೊಳಿಸಿ ದೇವಸ್ಥಾನದ ರಾಷ್ಟ್ರೀಕರಣ ಗೊಳಿಸಿರಿ’, ಎಂದು ಅವರು ಹೇಳಿದರು. (ದೇವಸ್ಥಾನಗಳ ರಾಷ್ಟ್ರೀಕರಣ ಮಾಡುವುದರ ಬಗ್ಗೆ ಮಾತನಾಡುವ ಖೆಡೆಕರ ಚರ್ಚ್ ಮತ್ತು ಮಸೀದಿ ಇದರ ರಾಷ್ಟ್ರೀಕರಣ ಮಾಡುವ ಅಂಶ ಏಕೆ ಹೇಳುವುದಿಲ್ಲ ? – ಸಂಪಾದಕರು) ‘ದೇವಸ್ಥಾನದ ಹಣ ಬಡ ಮಕ್ಕಳ ಶಿಕ್ಷಣಕ್ಕಾಗಿ ಉಪಯೋಗಿಸಿ. ದೇವಸ್ಥಾನಗಳನ್ನು ಭಟ್ ಮುಕ್ತಗೊಳಿಸುವುದಕ್ಕಾಗಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುವುದು’, ಎಂದು ಕೂಡ ಅವರು ಹೇಳಿದರು. (ದೇವಸ್ಥಾನದ ಹಣ ಬಡ ಮಕ್ಕಳ ಶಿಕ್ಷಣಕ್ಕಾಗಿ ಉಪಯೋಗಿಸಲು ಕರೆ ನೀಡುವ ಖೆಡೆಕರ ಮಹಾಶಯರು ಇತರ ಧರ್ಮದ ಧಾರ್ಮಿಕ ಸ್ಥಳದಲ್ಲಿನ ಹಣದ ಬಗ್ಗೆ ಇದೇ ರೀತಿಯ ಹೇಳಿಕೆ ನೀಡುವ ಧೈರ್ಯ ತೋರಿಸುವರೆ ? – ಸಂಪಾದಕರು)