ಶಹಾಪುರ (ಬೆಳಗಾವಿ) ಇಲ್ಲಿಯ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಸಾವಿರಾರು ಹಿಂದುಗಳ ಉಪಸ್ಥಿತಿಯಲ್ಲಿ ಹಿಂದೂ ರಾಷ್ಟ್ರದ ಘೋಷಣೆ !

ಹಿಂದುಗಳ ಭೂಮಿ ಕಬಳಿಸಲು ನೋಡುತ್ತಿರುವ ವಕ್ಫ ಬೋರ್ಡಿನ ಅಧಿಕಾರ ರದ್ದು ಪಡಿಸುವುದಕ್ಕಾಗಿ ಸಂಘಟಿತರಾಗಿ ಧ್ವನಿ ಎತ್ತಿರಿ !- ಶ್ರೀ ಮನೋಜ್ ಖಾಡಯೆ, ಹಿಂದೂ ಜನ ಜಾಗೃತಿ ಸಮಿತಿ

ಬೆಳಗಾಮ – ಹಲಾಲ್ ನ ಆರ್ಥಿಕ ಜಿಹಾದ ದಂತೆ ಮುಸಲ್ಮಾನರ ವಕ್ಫ್ ಬೋರ್ಡ ನಿಂದ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ವಕ್ಫ್ ಬೋರ್ಡಿಗೆ ಕಾನೂನಿನ ಪ್ರಕಾರ ಹಿಂದೂಗಳ ಮನೆ, ಅಂಗಡಿ, ಹೊಲ, ಭೂಮಿ ಮತ್ತು ಧಾರ್ಮಿಕ ಸ್ಥಳಗಳ ಜೊತೆ ಸರಕಾರದ ಆಸ್ತಿ ಕಬಳಿಸುವ ಪೈಶಾಚಿಕ ಅಧಿಕಾರ ನೀಡಲಾಗಿದೆ. ಬೆಳಗಾವಿಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಅನೇಕ ಸ್ಥಳಗಳಲ್ಲಿ ಹಿಂದುಗಳ ಭೂಮಿ ಕಬಳಿಸಿರುವ ಘಟನೆಗಳು ಬಹಿರಂಗವಾಗಿವೆ. ದೇಶದಲ್ಲಿನ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿನ ಅನೇಕ ಜಿಲ್ಲೆಯಲ್ಲಿ ಹಿಂದೂಗಳ ಭೂಮಿಯನ್ನು ವಕ್ಫ್ ಬೋರ್ಡಿನಿಂದ ಕಬಳಿಸಲಾಗಿದೆ. ೨೦೦೯ ರಲ್ಲಿ ವಕ್ಫ್ ಬೋರ್ಡ್ ಬಳಿ ೪ ಲಕ್ಷ ಎಕರೆ ಇರುವ ಭೂಮಿ ಇಂದು ೮ ಲಕ್ಷ ೬೦ ಸಾವಿರಕ್ಕಿಂತಲೂ ಹೆಚ್ಚು ಎಕರೆ ಆಗಿದೆ. ಇಷ್ಟೊಂದು ಭೂಮಿ ವಕ್ಫ್ ಬೋರ್ಡ್ ಬಳಿ ಎಲ್ಲಿಂದ ಬಂದಿತು ? ಭಾರತದಲ್ಲಿ ನಡೆಯುತ್ತಿರುವ ಎಲ್ಲಕ್ಕಿಂತ ದೊಡ್ಡದು ಲ್ಯಾಂಡ್ ಜಿಹಾದ್ ಕರಾಳ ಕಾನೂನು ರದ್ದುಪಡಿಸುವುದಕ್ಕಾಗಿ ಹಿಂದೂಗಳು ಸಂಘಟಿತರಾಗಿ ಪ್ರತಿಭಟಿಸಬೇಕು ಎಂದು, ಹಿಂದೂ ಜನಜಾಗೃತಿ ಸಮಿತಿಯ ಪಶ್ಚಿಮ ಮಹಾರಾಷ್ಟ್ರ, ಕೊಕಣ, ಗೋವಾ ಮತ್ತು ಗುಜರಾತ ರಾಜ್ಯದ ಸಮನ್ವಯಕರಾದ ಶ್ರೀ. ಮನೋಜ ಖಾಡ್ಯೆ ಇವರು ಹೇಳಿದರು. ಅವರು ಮಾರ್ಚ್ ೧೯ ರಂದು ಬೆಳಗಾವಿ ಜಿಲ್ಲೆಯಲ್ಲಿನ ಶಹಾಪುರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗ ಹಿಂದು ರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಈ ಸಭೆಗಾಗಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಹಿಂದೂ ರಾಷ್ಟ್ರದ ಉದ್ಘೋಷ ಮಾಡಿದರು. ಈ ಸಭೆಯಲ್ಲಿ ಸನಾತನ ಸಂಸ್ಥೆಯ ಧರ್ಮ ಪ್ರಸಾರಕ ಸದ್ಗುರು ಸ್ವಾತಿ ಖಾಡಯೆ, ಹಿಂದೂ ಜನಜಾಗೃತಿ ಸಮಿತಿಯ ನ್ಯಾಯವಾದಿ ಸಂಘಟಕ ನ್ಯಾಯವಾದಿ ನಿಲೇಶ ಸಾಂಗೊಲಕರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಣರಾಗಣಿ ಶಾಖೆಯ ಬೆಂಗಳೂರು ಜಿಲ್ಲಾ ಸಮನ್ವಯಕಿ ಸೌ. ಭವ್ಯ ಗೌಡ ಇವರು ಕೂಡ ಮಾರ್ಗದರ್ಶನ ನೀಡಿದರು. ವೇದಮೂರ್ತಿ ವಾಸುದೇವ ಛತ್ರೆ ಗುರೂಜಿ ಮತ್ತು ಪುರೋಹಿತ ಚೈತನ್ಯ ಛತ್ರೆ ಇವರು ವೇದಮಂತ್ರಪಠಣ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ವರದಿ ಬೆಳಗಾವಿ ಜಿಲ್ಲೆಯ ಸಮನ್ವಯಕ ಶ್ರೀ. ಋಷಿಕೇಶ ಗುರ್ಜರ ಇವರು ಮಂಡಿಸಿದರು. ಸೂತ್ರ ಸಂಚಾಲನೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಕಿರಣ ದುಸೆ ಮತ್ತು ಕು. ದಿವ್ಯ ಶಿಂತ್ರೆ ಇವರು ಮಾಡಿದರು.

ಕಾಲಮಹಾತ್ಮೆಯ ಪ್ರಕಾರ ೨೦೨೫ ಕ್ಕೆ ಕಲಿಯುಗಾಂತರ್ಗತ ಸತ್ಯಯುಗ ಅಂದರೆ ಹಿಂದೂ ರಾಷ್ಟ್ರ ಬರಲಿದೆ ! – ಸದ್ಗುರು ಸ್ವಾತಿ ಖಾಡ್ಯೆ, ಸನಾತನ ಸಂಸ್ಥೆ

ಇತ್ತೀಚಿನ ಸಮಯದಲ್ಲಿ ಹಿಂದೂ ಯುವತಿಯರ ಆತ್ಮಹತ್ಯೆಯ ಪ್ರಮಾಣ ಹೆಚ್ಚಿದೆ. ಕೆಲವೊಮ್ಮೆ ನಿರಾಸೆಯಿಂದ, ಕೆಲವೊಮ್ಮೆ ಯುವಕರ ಕಿರುಕುಳ ತಾಳಲಾರದೆ, ಹಾಗೂ ಕೆಲವೊಮ್ಮೆ ಇತರ ಕಾರಣಗಳಿಂದ ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೂ ಯುವತಿಯರಿಗೆ ಸಾಧನೆ ಮತ್ತು ಧರ್ಮದ ಮಹತ್ವ ತಿಳಿಯದೆ ಇರುವುದರಿಂದ ಸಾಮಾಜಿಕ ಕಿರುಕುಳ ಎದುರಿಸಲು ಅವರ ಬಳಿ ಆತ್ಮ ಬಲ ಮನೋಬಲ ಇರುವುದಿಲ್ಲ. ಸಾಮಾಜಿಕ ಪರಿಸ್ಥಿತಿಯನ್ನು ಎದುರಿಸಲು ಇಂದಿನ ಯುವತಿಯರು ಸಾಧನೆ ಮಾಡೋದು ಅವಶ್ಯಕವಾಗಿದೆ.
ಬರುವ ಕಾಲ ಇದು ಆಪತ್ಕಾಲವಾಗಿದೆ , ಎಂದು ಅನೇಕ ಸಂತರು ಮತ್ತು ದಾರ್ಶನಿಕರು ಹೇಳಿದ್ದಾರೆ . ಭೂಕಂಪ, ಉಷ್ಣತೆಯ ಅಲೆಗಳು, ನೆರೆಹಾವಳಿ, ಚಂಡಮಾರುತ ಇಂತಹ ಸಂಕಟಗಳ ಸರಮಾಲೆಯೇ ಬರುವುದು. ಇತ್ತೀಚಿಗೆ ಟರ್ಕಿ ಸಿರಿಯಾದಲ್ಲಿ ಬಂದಿರುವ ವಿನಾಶಕಾರಿ ಭೂಕಂಪದಲ್ಲಿ ೨೫ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದರು. ಕಾಲಮಹಾತ್ಮೆಯ ಪ್ರಕಾರ ೨೦೨೫ ರಲ್ಲಿ ಕಲಿಯುಗಾಂತರ್ಗತ ಸತ್ಯಯುಗ ಎಂದರೆ ಹಿಂದೂ ರಾಷ್ಟ್ರ ಬರಲಿಕ್ಕೆ ಇದೆ. ಆದ್ದರಿಂದ ಹಿಂದೂ ರಾಷ್ಟ್ರದ ಮುಂಜಾವು ನೋಡುವುದಕ್ಕಾಗಿ ಸಾಧನೆ ಮಾಡಿರಿ. ಮತ್ತು ಧರ್ಮಚರಣಿಗಳಾಗಿರಿ , ಎಂದು ಸದ್ಗುರು ಸ್ವಾತಿ ಖಾಡಯೆ ಇವರು ಕರೆ ನೀಡಿದರು.

ಕೇವಲ ಹಿಂದೂ ದೇವಸ್ಥಾನಗಳಿಗೆ ಸರಕಾರಿಕರಣದ ನೋಟಿಸ್ , ಇದೆಂಥಾ ಸೆಕ್ಯುಲರಿಸಂ ? – ನ್ಯಾಯವಾದಿ ನಿಲೇಶ ಸಾಂಗೋಲಕರ

ಬೆಳಗಾವ ನಗರದಲ್ಲಿನ ದಕ್ಷಿಣ ಕಾಶಿ ಕಪಿಲೇಶ್ವರ ದೇವಸ್ಥಾನ ಸಹಿತ ೪೯ ದೇವಸ್ಥಾನಗಳಲ್ಲಿ ವ್ಯವಸ್ಥಾಪಕ ಸಮಿತಿ ಸ್ಥಾಪನೆ ಮಾಡುವ ಹಿನ್ನೆಲೆಯಲ್ಲಿ ದತ್ತಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದೆ. ಕೆಳವರ್ಗದ ದೇವಸ್ಥಾನದಲ್ಲಿ ಮುಂದಿನ ೩ ವರ್ಷಗಳಿಗಾಗಿ ೯ ಜನರ ಸಮಿತಿ ಸ್ಥಾಪಿಸುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇತರ ಧರ್ಮದ ಪ್ರಾರ್ಥನಾ ಸ್ಥಳಗಳಲ್ಲಿ ವ್ಯವಸ್ಥಾಪನ ಸಮಿತಿ ನೇಮಕ ಮಾಡುವುದಕ್ಕಾಗಿ ನೋಟಿಸ್ ಯಾವಾಗ ನೀಡುವರು ,? ಕೇವಲ ಹಿಂದೂ ದೇವಸ್ಥಾನಗಳಿಗೆ ಸರಕಾರಿಕರಣದ ನೋಟಿಸ್ ನೀಡಲಾಗುತ್ತದೆ ಇದು ಯಾವ ಸಮಾನತೆ ಮತ್ತು ಇದೆಂತಹ ಸೆಕ್ಯುಲರಿಸಂ ? ಎಂದು ನ್ಯಾಯವಾದಿ ನಿಲೆಶ ಸಂಗೋಲಕರ ಇವರು ಈ ಸಮಯದಲ್ಲಿ ಹೇಳಿದರು. ಅವರು ಈ ಸಂದರ್ಭದಲ್ಲೇ ಹಿಂದೂಗಳು ಸಂಘಟಿತರಾಗಿ ಒಗ್ಗಟ್ಟಿನಿಂದ ಪ್ರತಿಭಟಿಸಲು ಕರೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆಸುವ ಹಿಂದೂ ರಾಷ್ಟ್ರ ಜಾಗೃತಿ ಸಭೆ ಇವು ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತವೆ ಹೀಗಿರುವಾಗ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ ಎಫ್ ಐ) ರಾಜಕೀಯ ಶಾಖೆ ಇರುವ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ , ಹಿಂದೂ ಜನಜಾಗೃತಿ ಸಮಿತಿಯ ಸಭೆಗಳನ್ನು ನಿಷೇಧಿಸಲು ಒತ್ತಾಯಿಸಿತು. ಸಭೆಯ ಆಯೋಜಕರಿಗೆ ದೂರವಾಣಿ ಕರೆ ಮಾಡಿ ಅವರಿಗೆ ಜೀವ ಬೆದರಿಕೆ ನೀಡುವ ಕೃತ್ಯ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯಿಂದ ಈ ರೀತಿಯ ಸಭೆ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ನಡೆಯುತ್ತಿವೆ. ಆದರೆ ಈ ಸಭೆಯಿಂದ ಎಲ್ಲಿಯೂ ಸಂವಿಧಾನ ವಿರೋಧಿ ಕೃತಿಗಳು ನಡೆದಿಲ್ಲ. ಹೀಗಿರುವಾಗ ಕೇವಲ ಹಿಂದೂ ದ್ವೇಷಕ್ಕಾಗಿ ಈ ರೀತಿಯ ಆರೋಪ ಮಾಡುತ್ತಾರೆ ಇದು ಸ್ಪಷ್ಟವಾಗುತ್ತದೆ. ಆದ್ದರಿಂದ ಯಾವ ರೀತಿ ಮತಾಂಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವನ್ನು ನಿಷೇಧಿಸಿದೆ. ಅದೇ ರೀತಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದನ್ನು ಕೂಡ ನಿಷೇಧಿಸಬೇಕು ಎಂದು ಹಿಂದೂಗಳು ಪಟ್ಟು ಹಿಡಿಯಬೇಕು.

ಲವ್ ಜಿಹಾದಿನ ಮಾಧ್ಯಮದಿಂದ ಹಿಂದೂ ಹುಡುಗಿಯರನ್ನು ಪ್ರೇಮದ ಬಲೆಗೆ ಎಳೆದು ಅವರ ಮತಾಂತರ ಮಾಡುವ ಷಡ್ಯಂತ್ರ ! – ಸೌ. ಭವ್ಯ ಗೌಡ, ರಣರಾಗಿಣಿ ಶಾಖೆ

ಕರ್ನಾಟಕದಲ್ಲಿನ ಹುಬ್ಬಳ್ಳಿಯ ಅಪೂರ್ವ ಈ ಹಿಂದೂ ಯುವತಿಯನ್ನು ಆಕೆಯ ಮತಾಂಧ ಪತಿಯು ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದನು. ಮತಾಂಧ ಸಂಘಟನೆ ಪಿ ಎಫ್ ಐ ನ ಶಾಖೆ ಆಗಿರುವ ಶಾಹಿನ್ ಗ್ಯಾಂಗ್ ದ ಮುಸಲ್ಮಾನ ಯುವತಿಯರು ಹಿಂದೂ ಯುವತಿಯರ ಜೊತೆ ಮೊದಲು ಸ್ನೇಹ ಬೆಳೆಸುತ್ತಾರೆ ನಂತರ ಅವರ ಪರಿಚಯ ಮುಸಲ್ಮಾನ ಯುವಕರ ಜೊತೆ ಮಾಡಿಸುತ್ತಾರೆ. ಇದೇ ಮುಸಲ್ಮಾನ ಯುವಕರು ನಂತರ ಯುವತಿಯರಿಗೆ ಮೋಸ ಮಾಡುತ್ತಾರೆ. ಇದು ಬಹಳ ಭಯಾನಕವಾಗಿದೆ. ಧರ್ಮ ಶಿಕ್ಷಣದ ಅಭಾವ ಮತ್ತು ಹಿಂದೂ ಧರ್ಮದ ಶ್ರೇಷ್ಠತೆ ತಿಳಿಯದೆ ಇರುವುದರಿಂದ ಹಿಂದೂ ಯುವತಿಯರು ಮತಾಂತರವಾಗುತ್ತಾರೆ. ಆದ್ದರಿಂದ ಹಿಂದೂಗಳೇ ಬಾಲ್ಯದಿಂದಲೇ ನಿಮ್ಮ ಹುಡುಗಿಯರಿಗೆ ಧರ್ಮ ಶಿಕ್ಷಣ ನೀಡುವುದು ಅವಶ್ಯಕವಾಗಿದೆ. ಹಿಂದೂ ಭಗಿನಿಯರೇ, ಲವ್ ಜಿಹಾದ್ ಇದು ಹಿಂದೂ ಹುಡುಗಿಯರ ಭಾವನೆಗಳ ಜೊತೆ ಆಟವಾಗಿದ್ದು ಹಿಂದೂ ಧರ್ಮ ಪರಂಪರೆಯ ಮೇಲಿನ ಸಂಕಟವಾಗಿದೆ. ಆದ್ದರಿಂದ ಸಮಯ ಇರುವಾಗಲೇ ಎಚ್ಚೆತ್ತುಕೊಳ್ಳಿ, ಇದರ ವಿರುದ್ಧ ಹೋರಾಡಲು ಸಜ್ಜಾಗಿರಿ.

ಉಪಸ್ಥಿತವಿರುವ ಪಕ್ಷ, ಸಂಘಟನೆ ಮತ್ತು ಸಂಪ್ರದಾಯ – ಭಾಜಪ, ಹಮಾರಾ ದೇಶ್, ಭಗವೆ ವಾದಳ, ಬಜರಂಗದಳ, ವಿಶ್ವ ಹಿಂದೂ ಪರಿಷತ್, ಶ್ರೀ ಶಿವ ಪ್ರತಿಷ್ಠಾನ ಹಿಂದುಸ್ತಾನ್, ವಾರಕರಿ ಸಂಪ್ರದಾಯ, ಹಿಂದೂ ರಾಷ್ಟ್ರ ಸೇನೆ ಇದರ ಜೊತೆಗೆ ವಿವಿಧ ಸ್ಥಳೀಯ ಸಂಘಟನೆ ಮತ್ತು ಸಂಪ್ರದಾಯ.