ಕಾಸರಗೋಡಿನಲ್ಲಿ (ಕೇರಳ) ಉಸ್ತುವಾರಿ ಸಚಿವ ಅಹಮದ ದೇವರಕೋವಿಲ್ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದರು !

ಈ ಘಟನೆಯು ತಪ್ಪಾಗಿ ಸಂಭವಿಸಿದೆಯೇ ಅಥವಾ ಉದ್ದೇಶಪೂರ್ವಕವಾಗಿ ನಡೆದಿದೆಯೇ, ಎಂಬುದರ ತನಿಖೆಯಾಗಬೇಕು !

ಕಾಸರಗೋಡು (ಕೇರಳ) – ಇಲ್ಲಿಯ ಉಸ್ತುವಾರಿ ಸಚಿವ ಹಾಗೂ ಇಂಡಿಯನ ನ್ಯಾಶನಲ್ ಲೀಗನ ನಾಯಕ ಅಹಮದ ದೇವರಕೊವಿಲ ಇವರು ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡುವಾಗ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದರು. ಅಷ್ಟೇ ಅಲ್ಲ, ಅಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ, ಜಿಲ್ಲಾ ಉಸ್ತುವಾರಿ ಅಧಿಕಾರಿ ಎ.ಕೆ. ರಾಮೇಂದ್ರನ್ ಮತ್ತಿತರ ಪೊಲೀಸರು ಅದಕ್ಕೆ ವಂದಿಸಿದರು.

ಈ ತಪ್ಪು ಕೆಲ ಪತ್ರಕರ್ತರ ಗಮನಕ್ಕೆ ಬಂದ ನಂತರ ಅವರು ಅಧಿಕಾರಿಗಳಿಗೆ ತಿಳಿಸಿದಾಗ ರಾಷ್ಟ್ರಧ್ವಜ ಸರಿ ಮಾಡಿ ಪುನಃ ಹಾರಿಸಲಾಯಿತು.

(ಈ ಚಿತ್ರವನ್ನು ತೋರಿಸುವುದರ ಉದ್ದೇಶ ಯಾರ ರಾಷ್ಟೀಯ ಭಾವನೆಗೆ ಧಕ್ಕೆ ತರುವುದಾಗಿರದೆ ನಿಜ ಸ್ಥಿತಿ ತೋರಿಸಿರುವುದಾಗಿದೆ)