ಬಡ ಹುಡುಗಿಯ ಮೇಲೆ ಚರ್ಚ್‌ನ ಪಾದ್ರಿಯಿಂದ ಅತ್ಯಾಚಾರ, ವಿಡಿಯೋ ಮಾಡಿದ ಪತ್ನಿ !

ಹುಡುಗಿ ದೂರು ನೀಡಿದನಂತರ ಇಬ್ಬರ ಬಂಧನ !

ಅಸಹಾಯಕ ಜನರಿಗೆ ಸಹಾಯ ಹಸ್ತ ಚಾಚುವ ಕ್ರೈಸ್ತರ ನಿಜಸ್ವರೂಪವನ್ನು ಅರಿಯಿರಿ !

ಇಂತಹವರಿಂದ ಜಾಗೃತರಾಗಿರಲು ಹಿಂದೂಗಳು ಸ್ವಧರ್ಮಾನುಸಾರ ಆಚರಣೆ ಮಾಡುವುದೇ ಹಿತಕರವಾಗಿದೆ, ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿರಿ !

ಹಿಂದೂ ಸಾಧು-ಸಂತರ ಮೇಲೆ ಏನಾದರೂ ಆರೋಪವಾದ ಕೂಡಲೇ, ಎಲ್ಲ ಪ್ರಸಾರ ಮಾಧ್ಯಮಗಳು ಹಿಂದೂಗಳ ಎಲ್ಲ ಸಂತರ ಮೇಲೆ ಕೆಸರು ಎರಚುತ್ತಾರೆ, ಅವರಲ್ಲಿ ಸ್ಪರ್ಧೆಯೇ ನಡೆಯುತ್ತಿರುತ್ತದೆ. ಈಗ ಮಾತ್ರ ಎಲ್ಲ ಪ್ರಸಾರ ಮಾಧ್ಯಮಗಳು ಯಾವ ಬಿಲದಲ್ಲಿ ಹೋಗಿ ಅಡಗಿದ್ದಾರೆ ?

ಕರ್ಣಾವತಿ(ಗುಜರಾತ) – ಗುಜರಾತ ರಾಜ್ಯದ ತಾಪಿ ಜಿಲ್ಲೆಯಲ್ಲಿರುವ ಸೋನಗಡ ತಾಲೂಕಿನ ಒಂದು ಚರ್ಚ್‌ನಲ್ಲಿ ಪ್ರಾರ್ಥನೆಗಾಗಿ ಹೋಗುವ ೧೬ ವರ್ಷದ ಹುಡುಗಿಯ ಮೇಲೆ ಅಲ್ಲಿಯ ಪಾದ್ರಿ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪಾದ್ರಿ ಈ ಹುಡುಗಿಯ ಮೇಲೆ ಲೈಂಗಿಕ ಅತ್ಯಾಚಾರ ಮಾಡುತ್ತಿರುವಾಗ ಅವನ ಪತ್ನಿಯು ಈ ಘಟನೆಯ ವಿಡಿಯೊ ಮಾಡಿದಳು, ಹಾಗೆಯೇ ಹುಡುಗಿಯ ಅಶ್ಲೀಲ ಛಾಯಾಚಿತ್ರಗಳನ್ನು ಕೂಡ ತೆಗೆದಳು. ಅತ್ಯಾಚಾರದ ಘಟನೆ ಮೇ ೨೦೨೧ ರಲ್ಲಿ ಜರುಗಿದ್ದು ೨೮ ಡಿಸೆಂಬರ ೨೦೨೧ ರಂದು ಪೊಲಿಸರಲ್ಲಿ ದೂರ ದಾಖಲಿಸಲಾಯಿತು. ತದನಂತರ ಪಾದ್ರಿ ಬಳಿರಾಮ ಕೊಕಣಿ ಮತ್ತು ಅವನ ಪತ್ನಿ ಅನಿತಾ ಇವರಿಬ್ಬರನ್ನು ಬಂಧಿಸಲಾಯಿತು.

ಪೊಲಿಸರ ದೂರಿನ ನೊಂದಣಿಯಲ್ಲಿ,

೧. ಸಂತ್ರಸ್ಥೆಯು ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಾಳೆ. ಆಕೆ ತನ್ನ ತಂದೆ-ತಾಯಿಯೊಂದಿಗೆ ಪ್ರಾರ್ಥನೆಗಾಗಿ ಚರ್ಚ್‌ಗೆ ಹೋಗುತ್ತಿದ್ದಳು. ಒಮ್ಮೆ ಪಾದ್ರಿ ಕೊಕಣಿ ಹುಡುಗಿಗೆ ಒಬ್ಬಳೇ ಭೇಟಿಯಾಗಲು ಕರೆದನು ಮತ್ತು ಅವಳ ಮೇಲೆ ಅತ್ಯಾಚಾರ ಮಾಡಿದನು.

೨. ಹುಡುಗಿಯು ಪೊಲಿಸರಲ್ಲಿ ದೂರು ನೀಡಬಾರದು, ಎಂದು ಪಾದ್ರಿ ಕೊಕಣಿ ಮತ್ತು ಅವನ ಪತ್ನಿ ಅನಿತಾ ಅವಳಿಗೆ ಬೆದರಿಕೆ ಹಾಕುತ್ತಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಅವಳ ವಿಡಿಯೋ ಪ್ರಸಾರವಾಗಬಾರದು ಈ ಹೆದರಿಕೆಯಿಂದ ಅವಳು ಅನೇಕ ತಿಂಗಳುಗಳ ವರೆಗೆ ಪೊಲಿಸರಲ್ಲಿ ದೂರು ದಾಖಲಿಸಿರಲಿಲ್ಲ.