ಅಸದುದ್ದಿನ್ ಓವೈಸಿ ಇವರು ಭಾಜಪಕ್ಕಿಂತ ಹೆಚ್ಚು ಅಪಾಯಕಾರಿ ! – ರಾಕೇಶ್ ಟಿಕೈತ್

ನವದೆಹಲಿ – ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದಿನ್ ಓವೈಸಿ ಭಾಜಪಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಓವೈಸಿ ಇಂತಹವರಿಂದ ಜನರು ಎಚ್ಚರದಿಂದಿರಬೇಕು, ಎಂದು ರೈತರ ನಾಯಕ ರಾಕೇಶ ಟಿಕೈತ್ ಹೇಳಿದರು. ಟಿಕೈತ ಇವರು ೩ ಕೃಷಿ ಕಾನೂನಿನ ವಿಷಯದಲ್ಲಿ, ‘ಸರಕಾರ ರೈತರ ಬೇಡಿಕೆ ಪೂರ್ಣಗೊಳಿಸದಿದ್ದರೆ, ನಾವು ಪುನಃ ಆಂದೋಲನ ಆರಂಭಿಸುವೆವು !’ ಎಂದು ಹೇಳಿದರು.