ಹೆಚ್ಚಿನ ಧರ್ಮದ ಜನರು ಹಿಂದೂ ವಂಶದವರು ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗೌಹಾಟಿ (ಅಸ್ಸಾಂ) – ಹಿಂದುತ್ವವು ೫ ಸಾವಿರ ವರ್ಷಗಳ ಹಿಂದೆ ಆರಂಭವಾಗಿದೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಿಂದುತ್ವವು ಒಂದು ಜೀವನ ಪದ್ಧತಿಯಾಗಿದೆ. ಆದ್ದರಿಂದ ಇದನ್ನು ಯಾರು ಹೇಗೆ ತಡೆಯಬಲ್ಲರು ? ಹೆಚ್ಚಿನ ಎಲ್ಲಾ ಧರ್ಮದ ಜನರು ಹಿಂದು ವಂಶದವರಾಗಿದ್ದಾರೆ. ಆದ್ದರಿಂದ ಹಿಂದುತ್ವವನ್ನು ಅಳಿಸಲು ಸಾಧ್ಯವಿಲ್ಲ. ಹೀಗೆ ಮಾಡುವುದೆಂದರೆ ನಮ್ಮ ಮೂಲ ಮತ್ತು ಮಾತೃಭೂಮಿಯಿಂದ ನಾವು ದೂರ ಹೋದಂತೆ ಆಗಿದೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಒಂದು ಪತ್ರಕರ್ತರ ಪರಿಷತ್ತಿನಲ್ಲಿ ಹೇಳಿದರು. ಅವರ ಸರಕಾರಕ್ಕೆ ೨ ತಿಂಗಳು ಆಗಿರುವುದರ ನಿಮಿತ್ತ ಈ ಪತ್ರಕರ್ತರ ಪರಿಷತ್ತನ್ನು ಆಯೋಜಿಸಲಾಗಿತ್ತು.