ಕ್ಯಾನ್ಸರ್‌ಅನ್ನು ಗುಣಪಡಿಸುವ ಹೆಸರಿನಲ್ಲಿ ಹಿಂದೂ ಕುಟುಂಬದವರಿಂದ ೮೦,೦೦೦ ರೂಪಾಯಿಗಳನ್ನು ತೆಗೆದುಕೊಂಡ ಪಾದ್ರಿಯ ವಿರುದ್ಧ ಅಪರಾಧ ದಾಖಲು

ಇಂತಹ ಸುದ್ದಿಗಳನ್ನು ಕಪಟ ಜಾತ್ಯತೀತ ಪ್ರಸಾರಮಾಧ್ಯಮಗಳು ಮುಚ್ಚಿಹಾಕುತ್ತವೆ ಮತ್ತು ಅಂ.ನಿ.ಸಯವರು ಕಪಟ ಕ್ರೈಸ್ತ ಪಾದ್ರಿಗಳ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಪಾದ್ರಿ ಬಲ್ವಿಂದರ್‌

ಜಲಂಧರ್ (ಪಂಜಾಬ್) – ಇಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ಪಾದ್ರಿ ಬಲ್ವಿಂದರ್‌ನು ಮುಂಬಯಿಯಲ್ಲಿ ವಾಸಿಸುತ್ತಿರುವ ಹಿಂದೂ ಕುಟುಂಬವರಿಂದ ೮೦,೦೦೦ ರೂಪಾಯಿ ಮೋಸ ಮಾಡಿರುವ ಘಟನೆಯು ಬೆಳಕಿಗೆ ಬಂದಿದೆ. ಅದೇರೀತಿ ಪಾದ್ರಿ ಕುಟುಂಬವನ್ನು ಮತಾಂತರಗೊಳಿಸಲೂ ಪ್ರಯತ್ನಿಸಿದ್ದರು. ಪಾದ್ರಿಯ ಬೆಂಬಲಿಗನೊಬ್ಬನು ಈ ಕುಟುಂಬದವರಿಗೆ, ಪಾದ್ರಿ ಬಲವಿಂದರ ಬಳಿ ಪ್ರತಿಯೊಂದು ರೋಗವನ್ನು ಗುಣಪಡಿಸುವ ಶಕ್ತಿಯಿದೆ ಎಂದು ತಿಳಿಸಿದ್ದನು. ಅದಕ್ಕಾಗಿಯೇ ಕುಟುಂಬವು ಜಲಂಧರಗೆ ತೆರಳಿತ್ತು.

ಬಲ್ವಿಂದರ್ ಮೊದಲು ಕುಟುಂಬದಿಂದ ಒಂದು ಲಕ್ಷ ರೂಪಾಯಿಯ ಬೇಡಿಕೆ ಇಟ್ಟಿದ್ದನು; ಆದರೆ, ಅವರು ೮೦,೦೦೦ ರೂಪಾಯಿ ಕೊಡಲು ನಿರ್ಧರಿಸಿದರು. ಚಿಕಿತ್ಸೆಯ ಹೆಸರಿನಲ್ಲಿ ಈ ಪಾದ್ರಿಯು ಎಣ್ಣೆ ಮತ್ತು ನೀರನ್ನು ಕೊಟ್ಟನು; ಆದರೆ ಅದನ್ನು ಉಪಯೋಗಿಸಿದ ನಂತರವೂ, ಈ ಕುಟುಂಬದ ಯುವತಿಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.