ಭಾರತವು ನುಸುಳುಕೋರರ ರಾಜಧಾನಿಯಾಗಲು ಸಾಧ್ಯವಿಲ್ಲ !

ರೋಹಿಂಗ್ಯಾ ನುಸುಳುಕೋರರನ್ನು ಬಿಡುಗಡೆ ಮಾಡುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ವಿರೋಧಿಸಿದೆ ಕೇಂದ್ರ ಸರಕಾರ !

ನವದೆಹಲಿ : ವಿಶ್ವದಲ್ಲಿ ನುಸುಳುಕೋರರ ರಾಜಧಾನಿ ಭಾರತವಲ್ಲ. ಹಾಗೆ ಆಗಲೂ ನಾವು ಬಿಡಿವುದಿಲ್ಲ. ಸರಕಾರ ಕಾನೂನಿನ ಪ್ರಕಾರ ತನ್ನ ಕೆಲಸವನ್ನು ಮಾಡುತ್ತಿದೆ, ಎಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ. ಈ ಪ್ರಕರಣವು ಜಮ್ಮು ಮತ್ತು ಕಾಶ್ಮೀರದಲ್ಲಿ ಆಶ್ರಯ ಪಡೆದಿರುವ ೧೫೦ ರೋಹಿಂಗ್ಯಾ ಮುಸ್ಲಿಮರಿಗೆ ಸಂಬಂಧಿಸಿದೆ. ಈ ಛಾವಣಿಯಲ್ಲಿನ ರೋಹಿಂಗ್ಯಾಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಅವರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡುವ ನಿರ್ಧಾರವನ್ನು ಕೇಂದ್ರ ಸರಕಾರ ಮುಂದೂಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಇದಕ್ಕೆ ಕೇಂದ್ರ ಸರಕಾರದ ನ್ಯಾಯವಾದಿ ತುಷಾರ್ ಮೆಹ್ತಾ ಇವರು ಛಾವಣಿಯಲ್ಲಿನ ರೋಹಿಂಗ್ಯಾಗಳು ನಿರಾಶ್ರಿತರಲ್ಲ ‘ನುಸುಳುಕೋರರು’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅರ್ಜಿದಾರರಾದ ಮೊಹಮ್ಮದ್ ಸಲೀಮುಲ್ಲಾ ಅವರು ನ್ಯಾಯವಾದಿ ಪ್ರಶಾಂತ ಭೂಷಣ ಮೂಲಕ ಅರ್ಜಿ ಸಲ್ಲಿಸಿದ್ದರು.

ವಿಚಾರಣೆಯಲ್ಲಿ, ನ್ಯಾಯವಾದಿ ಪ್ರಶಾಂತ್ ಭೂಷಣ ಅವರು, ‘ಮ್ಯಾನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರ ನರಸಂಹಾರದ ಬಗ್ಗೆ ಕಳೆದ ವರ್ಷ ಜನವರಿ ೨೩ರಂದು ಅಂತರರಾಷ್ಟ್ರೀಯ ನ್ಯಾಯಾಲಯವು ತೀರ್ಪು ನೀಡಿತ್ತು. ಮ್ಯಾನ್ಮಾರ್‌ನ ಸೈನಿಕರು ಮುಗ್ಧ ಜನರ ಹತ್ಯೆ ಮಾಡಿದೆ ಅದರಲ್ಲಿ ೭ ಲಕ್ಷ ೪೪ ಸಾವಿರ ರೋಹಿಂಗ್ಯಾಗಳು ನಿರಾಶ್ರಿತರಾದರು ಮತ್ತು ನೆರೆಯ ದೇಶಗಳಿಗೆ ಪಲಾಯನಗೈದರು.’ (ರೊಹಿಂಗ್ಯಾಗಳ ಬಗ್ಗೆ ನ್ಯಾಯಾಲಯದಲ್ಲಿ ಈ ರೀತಿಯಲ್ಲಿ ಜಗಳ ಮಾಡುವ ಇಂತಹ ನ್ಯಾಯವಾದಿಗಳನ್ನೇ ದೇಶದಿಂದ ಗಡೀಪಾರು ಮಾಡಬೇಕು ಎಂದು ಯಾರಾದರೂ ಬೇಡಿಕೆ ಮಾಡಿದರೆ ಆಶ್ಚರ್ಯಪಡಬೇಕಿಲ್ಲ ! – ಸಂಪಾದಕ) ಇದಕ್ಕೆ ‘ಈ ಅರ್ಜಿ ಭಾರತೀಯ ನಾಗರಿಕರಿಗಾಗಿ ಇದೆ. ಇತರ ದೇಶಗಳ ನಾಗರಿಕರಿಗಾಗಿ ಅಲ್ಲ’, ಎಂದು ಮುಖ್ಯ ನ್ಯಾಯಮೂರ್ತಿ ಶರದ್ ಬೊಬಡೆ ಸ್ಪಷ್ಟಪಡಿಸಿದ್ದಾರೆ.