ಹರಿದ್ವಾರ ಕುಂಭಮೇಳದಲ್ಲಿ ಭಾಗವಹಿಸುವ ಕೆಲವು ಸಂತರಿಂದ ಸಶಸ್ತ್ರ ಭದ್ರತಾ ಸಿಬ್ಬಂದಿ ಬೇಕೆಂಬ ಬೇಡಿಕೆ

೫ ಪ್ರಮುಖ ಸಂತರು ಮತ್ತು ಇತರ ೨೬ ಸಂತರಿಗೆ ಭದ್ರತೆ ಒದಗಿಸಿದ ಪೊಲೀಸರು

ಹರಿದ್ವಾರ (ಉತ್ತರಾಖಂಡ) – ಏಪ್ರಿಲ್ ೧ ರಿಂದ ಇಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದರೂ, ಕೆಲವು ಸಂತರು ಅಸುರಕ್ಷಿತ ಅನಿಸುತ್ತಿದೆ ಎಂದು ಕೆಲವು ಸಂತರು ಹೇಳಿದ್ದಾರೆ. ಅಖಿಲ ಭಾರತ ಅಖಾಡಾ ಪರಿಷತ್ತಿನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸೇರಿದಂತೆ ಐದು ಪ್ರಮುಖ ಸಂತರಿಗೆ ವೈ-ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದ್ದು, ಇತರ ೨೬ ಸಂತರಿಗೆ ಸರಕಾರಿ ವೆಚ್ಚದಲ್ಲಿ ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಪೊಲೀಸ್, ಅರೆಸೇನಾಪಡೆ ಮತ್ತು ರಾಷ್ಟ್ರೀಯ ಭದ್ರತಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ೧೦ ಕ್ಕೂ ಹೆಚ್ಚು ಸಂತರು ರಕ್ಷಣೆ ಕೋರಿದ್ದಾರೆ. ವಾಸ್ತವವಾಗಿ, ಈ ಸಂತರಿಗೆ ಯಾವುದೇ ಬೆದರಿಕೆ ಬಂದಿಲ್ಲ ಅಥವಾ ಅವರ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಇಲಾಖೆಯು ಸಹ ಮಾಹಿತಿಯನ್ನು ನೀಡಿಲ್ಲ.

ಈ ಬಗ್ಗೆ ಕುಂಭಮೇಳದ ಪೊಲೀಸ್ ನಿರೀಕ್ಷಕರಾದ ಸಂಜಯ್ ಗುಂಜಯಾಲ್ ಅವರು ಪ್ರಸ್ತುತ ಪೊಲೀಸ್ ರಕ್ಷಣೆ ನೀಡಲು ಸಾಧ್ಯವಿಲ್ಲ. ಜಾತ್ರೆಯ ಸಮಯದಲ್ಲಿ ಅಗತ್ಯವಿದ್ದರೆ ರಕ್ಷಣೆ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ