ಚೆನ್ನೈಯ ಯುವತಿಯನ್ನು ಬ್ರಿಟನ್‌ನಿಂದ ಅಪಹರಿಸಿ ಬಾಂಗ್ಲಾದೇಶಕ್ಕೆ ಕೊಂಡೊಯ್ದ ಬಾಂಗ್ಲಾದೇಶಿ ಮತಾಂಧ

ರಾಷ್ಟ್ರೀಯ ತನಿಖಾ ದಳದಿಂದ ‘ಲವ್ ಜಿಹಾದ್’ ಈ ನಿಟ್ಟಿನಿಂದ ತನಿಖೆ ಆರಂಭ

ಇಂತಹ ಮತಾಂಧರನ್ನು ಶರಿಯತ್‌ಗನುಸಾರ ಕೈ-ಕಾಲು ಕತ್ತರಿಸುವ ಶಿಕ್ಷೆಯನ್ನು ವಿಧಿಸಲು ಆಗ್ರಹಿಸಿದರೆ ಆಶ್ಚರ್ಯ ಪಡಬೇಕೆಂದಿಲ್ಲ !

ಚೆನ್ನೈ – ಕೆಲವು ಬಾಂಗ್ಲಾದೇಶಿ ಮತಾಂಧರು ಚೆನ್ನೈಯ ಯುವತಿಯನ್ನು ಬ್ರಿಟನ್‌ನಿಂದ ಅಪಹರಿಸಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೀಡಿತೆಯ ಪೋಷಕರು ೨೨ ಮೇ ೨೦೨೦ ರಂದು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಅಲ್ಲಿಂದ ಈ ಪ್ರಕರಣವು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಲಾಯಿತು. ಈ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳವು ಜುಲೈ ೨೦೨೦ ರಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸುತ್ತಾ ಈ ಘಟನೆಯನ್ನು ‘ಲವ್ ಜಿಹಾದ್’ ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದೆ.

ಈ ಪ್ರಥಮ ಮಾಹಿತಿ ವರದಿಯಲ್ಲಿ, ಪೀಡಿತೆಯು ಬ್ರಿಟನ್‌ನಲ್ಲಿ ಕಲಿಯುತ್ತಿದ್ದಳು. ಅಲ್ಲಿ ನಫೀಸ್ ಎಂಬ ಬಾಂಗ್ಲಾದೇಶಿ ಯುವಕನೊಂದಿಗೆ ಆಕೆ ಸಂಬಂಧ ಬೆಳೆಸಿದ್ದನು. ನಫೀಸನು ತನ್ನ ತಂದೆ ಸರದಾರ ಶೇಖಾವತ ಹುಸೇನ್, ಯಾಸಿರ್ ಹಾಗೂ ನೌಮನ ಅಲಿ ಖಾನ್ ಇವರ ಸಹಾಯದಿಂದ ಪೀಡಿತೆಯನ್ನು ಅಪಹರಿಸಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ದನು. ಅಲ್ಲಿ ಆಕೆಯನ್ನು ಬಂಧನದಲ್ಲಿಟ್ಟು ಬಲವಂತವಾಗಿ ಇಸ್ಲಾಮ್‌ಗೆ ಮತಾಂತರಿಸಿದನು. ಕೆಲವು ದಿನಗಳ ನಂತರ ಪೀಡಿತೆಗೆ ಅವಕಾಶ ಸಿಕ್ಕಿದ ಕೂಡಲೇ ಆಕೆಯು ತನ್ನ ತಂದೆಯನ್ನು ಸಂಪರ್ಕಿಸಿ ಈ ಎಲ್ಲ ಘಟನೆಗಳ ಮಾಹಿತಿಯನ್ನು ನೀಡಿದಳು. ಜೊತೆಗೆ ಆಕೆಯು ತನ್ನ ಮೇಲೆ ಶಾರೀರಿಕ ಶೋಷಣೆಯಾಗುತ್ತಿದ್ದು ಹಿಂಸಿಸಲಾಗುತ್ತಿದೆ ಎಂಬುದರ ಮಾಹಿತಿಯನ್ನು ತಂದೆಯವರಿಗೆ ನೀಡಿದರು. ನಂತರ ಪೀಡಿತೆಯ ಪಾಲಕರು ನಫೀಸನನ್ನು ಸಂಪರ್ಕಿಸಿ ಆಕೆಯ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಆಗ ನಫೀಸ್ ಹಾಗೂ ಆಕೆಯ ಕುಟುಂಬದವರು ಪೀಡಿತೆಯ ಪೋಷಕರಲ್ಲಿ ಹಣದ ಬಗ್ಗೆ ಬೇಡಿಕೆ ಮಾಡಿದರು. ನಂತರ ಪೀಡಿತೆಯ ಪಾಲಕರು ಪೊಲೀಸರಲ್ಲಿ ದೂರನ್ನು ದಾಖಲಿಸಿದರು.