ಅಸ್ಸಾಂನ ಭಾಜಪದ ನೂತನವಾಗಿ ಆಯ್ಕೆಯಾದ ಶಾಸಕ ದಿಗಂತ ಕಲಿತಾ ಅವರ ಆಗ್ರಹ

ಗೌಹಾಟಿ (ಅಸ್ಸಾಂ) – ಅಸ್ಸಾಂನ ಭಾಜಪದ ನೂತನವಾಗಿ ಆಯ್ಕೆಯಾದ ಶಾಸಕ ದಿಗಂತ ಕಲಿತಾ ಅವರು ಅಜಾನ್ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ಮಿತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅವರು, ಕಳೆದ ೫ ವರ್ಷಗಳಿಂದ ನಾನು ಶಾಸಕರ ನಿವಾಸದಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿ ಹತ್ತಿರದಲ್ಲೇ ಇರುವ ಒಂದು ಮಸೀದಿಯಿಂದ ಮುಂಜಾನೆಯಿಂದ ಸಂಜೆಯವರೆಗೆ ೫ ಬಾರಿ ಧ್ವನಿವರ್ಧಕಗಳ ಮೂಲಕ ಅಜಾನ್ ಕೇಳಿಸಲಾಗುತ್ತದೆ. ಅದರ ದೊಡ್ಡ ಧ್ವನಿಯಿಂದಾಗಿ ಅಲ್ಲಿ ವಾಸಿಸುವ ಜನರು ತೀವ್ರ ತೊಂದರೆಯನ್ನು ಎದುರಿಸಬೇಕಾಗಿದೆ.
Guwahati (Assam): “The use of loudspeakers during Azaan should be limited!” – Demand by newly elected BJP MLA Diganta Kalita (@diganta68)
Why should citizens and public representatives repeatedly have to raise this issue?
If loudspeakers violate peace and disturb residents, why… pic.twitter.com/WJq5spdx6I
— Sanatan Prabhat (@SanatanPrabhat) May 19, 2026
ಈ ವಿಷಯದ ಕುರಿತಾದ ನ್ಯಾಯಾಲಯದ ತೀರ್ಪುಗಳು ಮತ್ತು ಕಾನೂನು ನಿಬಂಧನೆಗಳ ಬಗ್ಗೆ ನಾನು ಆಳವಾದ ಅಧ್ಯಯನ ನಡೆಸುತ್ತಿದ್ದೇನೆ. ಶೀಘ್ರದಲ್ಲೇ ಈ ಇಡೀ ವಿಷಯವನ್ನು ಅಸ್ಸಾಂ ಸರಕಾರದ ಮುಂದೆ ಮಂಡಿಸಲಿದ್ದೇನೆ. ನಂಬಿಕೆ ತನ್ನ ಜಾಗದಲ್ಲಿದೆ; ಆದರೆ ಅದಕ್ಕಾಗಿ ಧ್ವನಿವರ್ಧಕಗಳ ಬಳಕೆ ಮಾಡುವುದು ಅನಿವಾರ್ಯವೇನಲ್ಲ. ಇದರಿಂದ ಇತರರಿಗೆ ಉಂಟಾಗುವ ಅನಾನುಕೂಲತೆಯನ್ನು ತಡೆಯಬೇಕು, ಎಂದು ಹೇಳಿದರು.
ತಾವು ಅಜಾನ್ ವಿರುದ್ಧವಾಗಿಲ್ಲ; ತಮ್ಮ ವಿರೋಧ ಕೇವಲ ಧ್ವನಿವರ್ಧಕಗಳ ಅತಿಯಾದ ಧ್ವನಿಗೆ ಮಾತ್ರ ಎಂದು ಶಾಸಕ ಕಲಿತಾ ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ