ಅಸ್ಸಾಂನ ಭಾಜಪದ ನೂತನವಾಗಿ ಆಯ್ಕೆಯಾದ ಶಾಸಕ ದಿಗಂತ ಕಲಿತಾ ಅವರ ಆಗ್ರಹ

ಗೌಹಾಟಿ (ಅಸ್ಸಾಂ) – ಅಸ್ಸಾಂನ ಭಾಜಪದ ನೂತನವಾಗಿ ಆಯ್ಕೆಯಾದ ಶಾಸಕ ದಿಗಂತ ಕಲಿತಾ ಅವರು ಅಜಾನ್ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ಮಿತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅವರು, ಕಳೆದ ೫ ವರ್ಷಗಳಿಂದ ನಾನು ಶಾಸಕರ ನಿವಾಸದಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿ ಹತ್ತಿರದಲ್ಲೇ ಇರುವ ಒಂದು ಮಸೀದಿಯಿಂದ ಮುಂಜಾನೆಯಿಂದ ಸಂಜೆಯವರೆಗೆ ೫ ಬಾರಿ ಧ್ವನಿವರ್ಧಕಗಳ ಮೂಲಕ ಅಜಾನ್ ಕೇಳಿಸಲಾಗುತ್ತದೆ. ಅದರ ದೊಡ್ಡ ಧ್ವನಿಯಿಂದಾಗಿ ಅಲ್ಲಿ ವಾಸಿಸುವ ಜನರು ತೀವ್ರ ತೊಂದರೆಯನ್ನು ಎದುರಿಸಬೇಕಾಗಿದೆ.
Guwahati (Assam): “The use of loudspeakers during Azaan should be limited!” – Demand by newly elected BJP MLA Diganta Kalita (@diganta68)
Why should citizens and public representatives repeatedly have to raise this issue?
If loudspeakers violate peace and disturb residents, why… pic.twitter.com/WJq5spdx6I
— Sanatan Prabhat (@SanatanPrabhat) May 19, 2026
ಈ ವಿಷಯದ ಕುರಿತಾದ ನ್ಯಾಯಾಲಯದ ತೀರ್ಪುಗಳು ಮತ್ತು ಕಾನೂನು ನಿಬಂಧನೆಗಳ ಬಗ್ಗೆ ನಾನು ಆಳವಾದ ಅಧ್ಯಯನ ನಡೆಸುತ್ತಿದ್ದೇನೆ. ಶೀಘ್ರದಲ್ಲೇ ಈ ಇಡೀ ವಿಷಯವನ್ನು ಅಸ್ಸಾಂ ಸರಕಾರದ ಮುಂದೆ ಮಂಡಿಸಲಿದ್ದೇನೆ. ನಂಬಿಕೆ ತನ್ನ ಜಾಗದಲ್ಲಿದೆ; ಆದರೆ ಅದಕ್ಕಾಗಿ ಧ್ವನಿವರ್ಧಕಗಳ ಬಳಕೆ ಮಾಡುವುದು ಅನಿವಾರ್ಯವೇನಲ್ಲ. ಇದರಿಂದ ಇತರರಿಗೆ ಉಂಟಾಗುವ ಅನಾನುಕೂಲತೆಯನ್ನು ತಡೆಯಬೇಕು, ಎಂದು ಹೇಳಿದರು.
ತಾವು ಅಜಾನ್ ವಿರುದ್ಧವಾಗಿಲ್ಲ; ತಮ್ಮ ವಿರೋಧ ಕೇವಲ ಧ್ವನಿವರ್ಧಕಗಳ ಅತಿಯಾದ ಧ್ವನಿಗೆ ಮಾತ್ರ ಎಂದು ಶಾಸಕ ಕಲಿತಾ ಅವರು ಸ್ಪಷ್ಟಪಡಿಸಿದ್ದಾರೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad