ಆಸ್ಸಾಂನಲ್ಲಿ ಸಮಾನ ನಾಗರಿಕ ಕಾನೂನು ಜ್ಯಾರಿಗೊಳ್ಳಲಿದೆ

ಮೇ ೨೬ ರಂದು ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಲಾಗುವುದು

ದಿಸಪುರ (ಆಸಾಮ) – ಆಸಾಮ ವಿಧಾನಸಭಾ ಚುನಾವಣೆಯ ವಿಜಯದ ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು ರಾಜ್ಯದಲ್ಲಿ ಸಮಾನ ನಾಗರಿಕ ಕಾನೂನನ್ನು ಜ್ಯಾರಿಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಸಮ್ಮತಿ ನೀಡಲಾಗಿದ್ದು, ಮೇ ೨೬ ರಂದು ವಿಧಾನಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸಲಾಗುವುದು. ಸರಕಾರವು ಈ ಕಾಯಿದೆಯಿಂದ ಬುಡಕಟ್ಟು ಸಮುದಾಯವನ್ನು ಸಂಪೂರ್ಣವಾಗಿ ಹೊರಗಿಡಲು ನಿರ್ಧರಿಸಿದೆ. ಉತ್ತರಾಖಂಡ, ಗೋವಾ ಮತ್ತು ಗುಜರಾತಿನ ನಂತರ ಈಗ ಆಸಾಮ ಈ ಕಾಯಿದೆಯನ್ನು ಜಾರಿಗೊಳಿಸುವ ರಾಜ್ಯವಾಗಲಿದೆ.

ಈ ಕಾಯಿದೆಯಡಿ ಉತ್ತರಾಧಿಕಾರ, ವಿವಾಹ, ಲಿವ್-ಇನ್ ರಿಲೇಶನ್‌ ಶಿಪ್ (ವಿವಾಹವಾಗದೆ ಜೊತೆಯಲ್ಲಿ ಇರುವುದು) ಮತ್ತು ವಿವಾಹ-ವಿಚ್ಛೇದನದ ಕಡ್ಡಾಯ ನೋಂದಣಿಯಂತಹ ಅಂಶಗಳನ್ನು ಸೇರಿಸಲಾಗುವುದು.

ಸಂಪಾದಕೀಯ ನಿಲುವು

ಈ ಕಾನೂನನ್ನು ಒಂದೊಂದೇ ರಾಜ್ಯದಲ್ಲಿ ಜ್ಯಾರಿಗೊಳಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶಕ್ಕಾಗಿ ಒಂದೇ ಕಾನೂನನ್ನು ರೂಪಿಸುವುದು ಅಪೇಕ್ಷಿತವಾಗಿದೆ, ಇಲ್ಲದಿದ್ದರೆ ಭಾಜಪದ ಸರಕಾರವಿರುವ ರಾಜ್ಯಗಳಲ್ಲಿ ಮಾತ್ರ ಈ ಕಾನೂನು ಇರುತ್ತದೆ ಮತ್ತು ಇತರ ರಾಜ್ಯಗಳಲ್ಲಿ ಇರುವುದಿಲ್ಲ. ದೇಶದ ದೃಷ್ಟಿಯಿಂದ ಇದು ಸೂಕ್ತವಲ್ಲ !