ಪಂಜಾಬ್‌ನಲ್ಲಿ ಭಾಜಪ ೨ ಕಾರ್ಯಾಲಯಗಳ ಮೇಲೆ ದಾಳಿ ಮಾಡಿ ಧ್ವಂಸ – BJP Offices Attacked

ಮೊಹಾಲಿ (ಪಂಜಾಬ್) – ಪಂಜಾಬ್‌ನಲ್ಲಿ ಮೇ ೧೧ ರಂದು ಭಾಜಪದ ೨ ಕಾರ್ಯಾಲಯಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ. ಮೊಹಾಲಿಯ ಜಿರಕ್ ಪುರದಲ್ಲಿ ೫ ಮುಸುಕುಧಾರಿ ಯುವಕರು ಭಾಜಪದ ಕಚೇರಿಗೆ ನುಗ್ಗಿ ಗೋಡೆಗಳು ಮತ್ತು ಭಿತ್ತಿಪತ್ರಗಳ ಮೇಲೆ ಶಾಯಿ ಎಸೆದಿದ್ದಾರೆ. ಇದಾದ ನಂತರ ಅವರು ಅಲ್ಲಿಂದ ಪರಾರಿಯಾಗಿದ್ದಾರೆ.
ಇನ್ನು ತರನತಾರಣ್ ನಲ್ಲಿನ ಘಟನೆಯಲ್ಲಿ, ೧೫ ರಿಂದ ೨೦ ಜನರು ಇದ್ದಕ್ಕಿದ್ದಂತೆ ಭಾಜಪ ಕಚೇರಿಗೆ ಲಾಠಿ ಹಿಡಿದು ನುಗ್ಗಿ ಧ್ವಂಸಗೊಳಿಸಿದ್ದಾರೆ, ಅಲ್ಲದೆ ಕುರ್ಚಿಗಳು ಮತ್ತು ಇತರ ಸಾಮಗ್ರಿಗಳಿಗೆ ಹಾನಿ ಮಾಡಿದ್ದಾರೆ. ಈ ಸಮಯದಲ್ಲಿ ಕೆಲವರು ಕಲ್ಲು ತೂರಾಟ ನಡೆಸುತ್ತಿರುವುದು ಕಂಡುಬಂದಿದೆ. ಅವರು ‘ಪಂಜಾಬ್ ಏಕತಾ ಜಿಂದಾಬಾದ್’ ಮತ್ತು ‘ಬಿಜೆಪಿ ಮುರ್ದಾಬಾದ್’ ಎಂಬ ಕರಪತ್ರಗಳನ್ನು ಗಾಳಿಯಲ್ಲಿ ತೂರಿದ್ದಾರೆ. ಈ ಸಂದರ್ಭದಲ್ಲಿ ಭಾಜಪ ನಾಯಕರು ಮತ್ತು ಕಾರ್ಯಕರ್ತರು ಒಬ್ಬ ದಾಳಿಕೋರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಂಪಾದಕೀಯ ನಿಲುವು

ಆಮ್ ಆದ್ಮಿ ಪಕ್ಷದ ಸರಕಾರದ ಅವಧಿಯಲ್ಲಿ ಪಂಜಾಬ್‌ನಲ್ಲಿ ರಾಜಕೀಯ ಪಕ್ಷದ ಕಚೇರಿಯ ಮೇಲೆ ಹಗಲು ಹೊತ್ತಿನಲ್ಲೇ ದಾಳಿ ನಡೆಯುತ್ತಿರುವುದು, ನಾಚಿಕೆಗೇಡಿನ ಸಂಗತಿ!