ನಮಾಜ್ ಸಮಯದಲ್ಲಿ ವಿಷ ಹಾವು ಕಂಡುಬಂದಲ್ಲಿ ತಕ್ಷಣವೇ ಅದನ್ನು ನಾಶಪಡಿಸಬೇಕು; ಭಾಜಪ- ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಂತಹದ್ದೇ ವಿಷಕಾರಿ ಹಾವು !

ಕುರಾನ್ ಅನ್ನು ಉಲ್ಲೇಖಿಸಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಆಸ್ಸಾಂನ ಮುಸಲ್ಮಾನರಿಗೆ ಕರೆ

ಗೌಹತ್ತಿ (ಆಸ್ಸಾಂ) – ‘ಇಲ್ಲಿ ಮುಸ್ಲಿಂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದಾರೆ, ಹಾಗೆಯೇ ಹಿಂದೂ ಬಾಂಧವರೂ ಇದ್ದಾರೆ. ಕುರಾನಿನಲ್ಲಿ ನಮಾನ್ ಸಮಯದಲ್ಲಿ ಪ್ರಾಣಾಪಾಯ ತಂದೊಡ್ಡುವ ಹಾವು ಕಂಡುಬಂದಲ್ಲಿ ತಕ್ಷಣವೇ ಅದನ್ನು ನಾಶಪಡಿಸಬೇಕು. ಭಾಜಪ-ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಂತಹದ್ದೇ ವಿಷಕಾರಿ ಹಾವು. ಅವುಗಳನ್ನು ನಾಶಪಡಿಸದಿದ್ದರೆ ಜೀವ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ’, ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಸಾಂನ ನೀಲಾಂಬಜಾರ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

  • ‘ನಮಾಜ್ ಸಮಯದಲ್ಲಿ ಜಿಹಾದಿ ಭಯೋತ್ಪಾದಕರು ಕಂಡುಬಂದಲ್ಲಿ ಅವರನ್ನು ನಾಶಪಡಿಸಿ’, ಎಂದು ಖರ್ಗೆ ಅವರು ಏಕೆ ಹೇಳುವುದಿಲ್ಲ?
  • ‘ಪೂಜೆಯ ಸಮಯದಲ್ಲಿ, ಆರತಿಯ ಸಮಯದಲ್ಲಿ ವಿಷಕಾರಿ ಹಾವು ಕಂಡುಬಂದಲ್ಲಿ ಅದನ್ನು ಕೊಲ್ಲಬೇಕು, ಕಾಂಗ್ರೆಸ್ ಅಂತಹದ್ದೇ ವಿಷಕಾರಿ ಹಾವು’, ಎಂದು ಯಾರಾದರೂ ಹೇಳಿದರೆ ಅದನ್ನು ಖರ್ಗೆ ಅವರು ಒಪ್ಪುತ್ತಾರೆಯೇ?