ಮುಂಬಯಿ ಸೇರಿದಂತೆ ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ೨ ಉಗ್ರರ ಬಂಧನ

  • ಭಯೋತ್ಪಾದನಾ ನಿಗ್ರಹ ದಳದ ಕಾರ್ಯಾಚರಣೆ!

  • ಭಯೋತ್ಪಾದನೆಗ್ರಸ್ತ ಭಾರತ!

ಮುಂಬಯಿ – ಮುಂಬಯಿ ಮತ್ತು ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಿದ್ಧತೆಯಲ್ಲಿದ್ದ ಇಬ್ಬರು ಭಯೋತ್ಪಾದಕರ ಸಂಚನ್ನು ಭಯೋತ್ಪಾದನಾ ನಿಗ್ರಹ ದಳ ವಿಫಲಗೊಳಿಸಿದೆ. ದಳ ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಒಬ್ಬನನ್ನು ಕುರ್ಲಾದಿಂದ ಹಾಗೂ ಮತ್ತೊಬ್ಬನನ್ನು ಖಡವಲಿ (ಠಾಣೆ ಜಿಲ್ಲೆ) ಯಿಂದ ವಶಕ್ಕೆ ಪಡೆದಿದ್ದಾರೆ. ‘ಜೈಷ್-ಎ-ಮೊಹಮ್ಮದ್’ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಕೆಲವು ಚಲನವಲನಗಳ ಮಾಹಿತಿಯನ್ನು ದೆಹಲಿ ಪೊಲೀಸರು ಪಡೆದಿದ್ದರು. ತದನಂತರ ದೆಹಲಿ ಪೊಲೀಸರು ಈ ಮಾಹಿತಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ ನೀಡಿದ್ದರು. ಇಬ್ಬರು ಆರೋಪಿಗಳಿಂದ ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧನದ ನಂತರ ಹೆಚ್ಚಿನ ವಿಚಾರಣೆಗಾಗಿ ಅವರನ್ನು ದೆಹಲಿಗೆ ಕರೆದೊಯ್ಯಲಾಗಿದೆ.