ಬಾಲಕಿಯ ಹಿರಿಯ ಸಹೋದರನೂ ಇದೇ ರೀತಿ ಮೃತಪಟ್ಟಿದ್ದ

ರಾಜಸ್ಥಾನ – ನಾಗೌರನ ಖಾಸಗಿ ಶಾಲೆಯೊಂದರಲ್ಲಿ ೯ ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಅವಳು ಆಟವಾಡುತ್ತಿದ್ದಾಗ ಕೆಳಗೆ ಬಿದ್ದಳು, ನಂತರ ಶಾಲೆಯ ಸಿಬ್ಬಂದಿ ಅವಳನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅವಳು ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು. ೪ ತಿಂಗಳ ಹಿಂದೆ ಅವಳ ಹಿರಿಯ ಸಹೋದರನೂ ಇದೇ ರೀತಿ ಹೃದಯಾಘಾತದಿಂದ ಮೃತಪಟ್ಟಿದ್ದನು.
೧. ಈ ಘಟನೆಯು ನಾಗೌರ್ ಜಿಲ್ಲೆಯ ಗೋಟನ್ ನಗರದ ‘ಗೋಟನ್ ಇಂಟರ್ನ್ಯಾಷನಲ್ ಸ್ಕೂಲ್’ನಲ್ಲಿ ಫೆಬ್ರವರಿ ೨೩ ರಂದು ಬೆಳಗ್ಗೆ ನಡೆದಿದೆ. ಶಾಲೆಯ ಸಂಚಾಲಕ ರಾಮಕುಂವರ ಓಲಾ ಅವರು ಮಾತನಾಡಿ, ತಾಳಣಪುರದ ರಾಜೇಂದ್ರ ಬಾಪೇಡಿಯಾ ಅವರ ಪುತ್ರಿ ದಿವ್ಯಾ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪ್ರತಿದಿನದಂತೆ ಶಾಲೆ ಆರಂಭವಾಗುವ ಮೊದಲು ಅವಳು ಇತರ ಮಕ್ಕಳೊಂದಿಗೆ ಮೈದಾನದಲ್ಲಿ ಆಟವಾಡುತ್ತಿದ್ದಳು. ಆಟವಾಡುತ್ತಾ ಇದ್ದಕ್ಕಿದ್ದಂತೆ ದಿವ್ಯಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಳು.
೨. ಶಾಲೆಯ ಸಿಬ್ಬಂದಿ ಕುಟುಂಬದವರಿಗೆ ಮಾಹಿತಿ ನೀಡುವುದರ ಜೊತೆಗೆ ದಿವ್ಯಾರನ್ನು ಗೋಟನನಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು; ಆದರೆ ಅಷ್ಟರಲ್ಲಾಗಲೇ ಅವಳು ಮೃತಪಟ್ಟಿದ್ದಳು. ವೈದ್ಯರ ಪ್ರಕಾರ, ದಿವ್ಯಾಳ ದೇಹದ ಮೇಲೆ ಯಾವುದೇ ರೀತಿಯ ಬಾಹ್ಯ ಗಾಯದ ಗುರುತುಗಳಿರಲಿಲ್ಲ. ಪ್ರಾಥಮಿಕ ತಪಾಸಣೆಯಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ನಂಬಲಾಗಿದೆ.
೩. ದಿವ್ಯಾಳ ಹಿರಿಯ ಸಹೋದರ ಅಭಿಷೇಕ ಕೂಡ ಇದೇ ರೀತಿ ಮೃತಪಟ್ಟಿದ್ದನು. ಸೆಪ್ಟೆಂಬರ್ ೯, ೨೦೨೫ ರಂದು ಮನೆಯಲ್ಲಿ ಆಟವಾಡುತ್ತಿದ್ದಾಗ ಅವನು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದನು. ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ವೈದ್ಯರು ತಪಾಸಣೆಯ ನಂತರ ಅವನು ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ