ಜಾರ್ಖಂಡ್‌ನಲ್ಲಿ ಏರ್ ಅಂಬ್ಯುಲೆನ್ಸ್ ಪತನ: ರೋಗಿ ಸೇರಿದಂತೆ ವಿಮಾನದಲ್ಲಿದ್ದ ಏಳು ಮಂದಿ ಸಾವು

ಪ್ರತಿಕೂಲ ಹವಾಮಾನದಿಂದಾಗಿ ಅಪಘಾತ

ರಾಂಚಿ (ಜಾರ್ಖಂಡ್) – ಇಲ್ಲಿಂದ ದೆಹಲಿಗೆ ಹೊರಟಿದ್ದ ಏರ್ ಅಂಬ್ಯುಲೆನ್ಸ್ ಫೆಬ್ರವರಿ ೨೩ ರ ರಾತ್ರಿ ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಒಬ್ಬ ರೋಗಿ ಸೇರಿದಂತೆ ಎಲ್ಲಾ ೭ ಮಂದಿ ಸಾವನ್ನಪ್ಪಿದ್ದಾರೆ. ‘ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌’ಗೆ ಸೇರಿದ ಈ ವಿಮಾನವು ಸಂಜೆ ೭:೧೧ ಕ್ಕೆ ರಾಂಚಿ ವಿಮಾನ ನಿಲ್ದಾಣದಿಂದ ಉಡಾವಣೆಗೊಂಡಿತು. ​ಪ್ರತಿಕೂಲ ಹವಾಮಾನದಿಂದಾಗಿ ವಿಮಾನದ ಮಾರ್ಗವನ್ನು ಬದಲಾಯಿಸಲು ಪೈಲಟ್ ವಿನಂತಿಸಿದ್ದರು; ಆದರೆ ಅದರ ನಂತರ ಸಂಪರ್ಕ ಕಡಿತಗೊಂಡಿತು. ವಿಮಾನ ಹಾರಾಟ ಆರಂಭಿಸಿದ ನಂತರ ೨0 ನಿಮಿಷಗಳಲ್ಲಿಯೇ ಈ ಅಪಘಾತ ಸಂಭವಿಸಿದೆ.