ಸಹ ಕೈದಿಯಿಂದಲೇ ಭಯೋತ್ಪಾದಕ ಅಬ್ದುಲ್ ರೆಹಮಾನ್‌ನ ಕೊಲೆ

ಫರೀದಾಬಾದ್ (ಹರಿಯಾಣ) ಜಿಲ್ಲೆಯ ನೀಮ್ಕಾ ಕಾರಾಗೃಹದಲ್ಲಿನ ಘಟನೆ

ಫರೀದಾಬಾದ್ (ಹರಿಯಾಣ) – ಇಲ್ಲಿನ ನೀಮ್ಕಾ ಕಾರಾಗೃಹದಲ್ಲಿ ಬಂಧಿಯಾಗಿದ್ದ ಭಯೋತ್ಪಾದಕ ಅಬ್ದುಲ್ ರೆಹಮಾನ್‌ನನ್ನು ಫೆಬ್ರವರಿ ೮ ರಂದು ಹತ್ಯೆ ಮಾಡಲಾಗಿದೆ. ಇದೇ ಕಾರಾಗೃಹದಲ್ಲಿದ್ದ ಅರುಣ್ ಚೌಧರಿ ಎಂಬ ಕೈದಿಯು ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ರೆಹಮಾನ್‌ನ ತಲೆಗೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಲಾಗಿದೆ.​ ಕೊಲೆಯ ಹಿಂದಿನ ನಿಖರವಾದ ಕಾರಣ ಇದುವರೆಗೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ಹತ್ಯೆಯು ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ್ದೇ ಅಥವಾ ವೈಯಕ್ತಿಕ ದ್ವೇಷದಿಂದ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಅಬ್ದುಲ್ ರೆಹಮಾನ್‌ನನ್ನು ಮಾರ್ಚ್ ೨೦೨೫ ರಲ್ಲಿ ಹರಿಯಾಣದ ಪಲ್ವಲ್‌ನಿಂದ ಬಂಧಿಸಲಾಗಿತ್ತು. ಆತನಿಂದ ೨ ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.​ ಈತ ಮೂಲತಃ ಉತ್ತರ ಪ್ರದೇಶದ ಅಯೋಧ್ಯೆಯ ನಿವಾಸಿಯಾಗಿದ್ದನು, ಅವನು ‘ಇಸ್ಲಾಮಿಕ್ ಸ್ಟೇಟ್ ಖೊರಾಸನ್’ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದನು. ಅಬ್ದುಲ್ ರೆಹಮಾನ್ ಮತ್ತು ಆತನ ಸಹಚರ ಸುಫಿಯಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅಯೋಧ್ಯೆಯಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಿದ್ದು ಬೆಳಕಿಗೆ ಬಂದಿತ್ತು ಆರೋಪಿ ಅರುಣ್ ಚೌಧರಿಯನ್ನೂ ಸಹ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿತ್ತು.