ಕೇವಲ 7 ದಿನಗಳಲ್ಲಿ 16 ಜನರನ್ನು ಬಲಿಪಡೆದ ಆನೆ

ಚಾಯಿಬಾಸಾ (ಜಾರ್ಖಂಡ್) – ಜಿಲ್ಲೆಯ ನೋವಾಮುಂಡಿ ಪ್ರಖಂಡದ ಜೇಟಿಯಾ ಪಂಚಾಯತ್ ವ್ಯಾಪ್ತಿಯ ಭರಬರಿಯಾ ಗ್ರಾಮದಲ್ಲಿ ಕಾಡಾನೆಯೊಂದು ಒಂದೇ ಕುಟುಂಬದ 6 ಜನರನ್ನು ಹೊಸಕಿ ಸಾಯಿಸಿದೆ. ಜನವರಿ 6 ರಂದು ರಾತ್ರಿ ಇವರೆಲ್ಲರೂ ಮನೆಯಲ್ಲಿ ಮಲಗಿದ್ದಾಗ ಇದ್ದಕ್ಕಿದ್ದಂತೆ ನುಗ್ಗಿದ ಆನೆಯು ಎಲ್ಲರನ್ನೂ ತುಳಿದು ಹಾಕಿದೆ. ಈ ವೇಳೆ ಒಬ್ಬ ಹುಡುಗ ಹೇಗೋ ಪ್ರಾಣ ಉಳಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಆನೆಯ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಆನೆಯು ಕಳೆದ 7 ದಿನಗಳಲ್ಲಿ ಈ ಭಾಗದ 16 ಜನರನ್ನು ಬಲಿಪಡೆದಿದೆ.
ಅರಣ್ಯ ಇಲಾಖೆಗೆ ಈ ಆನೆಯನ್ನು ಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಅನಂತ ಅಂಬಾನಿ ಅವರ ವನ್ಯಜೀವಿ ಸಂರಕ್ಷಣಾ ಸಂಸ್ಥೆ ‘ವನತಾರಾ’ದ ಸಹಾಯವನ್ನು ಕೋರಿದ್ದಾರೆ. ಸರಕಾರ ಮತ್ತು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿರುವ ಈ ಆನೆಯು ದಿನವಿಡೀ ಕಾಡಿನಲ್ಲಿ ಅಡಗಿಕೊಂಡಿದ್ದು, ಕತ್ತಲಾಗುತ್ತಿದ್ದಂತೆ ಗ್ರಾಮಗಳತ್ತ ನುಗ್ಗುತ್ತಿದೆ. ಆ ಸಮಯದಲ್ಲಿ ದಾರಿಯಲ್ಲಿ ಸಿಗುವ ಮನೆಗಳ ಮೇಲೆ ದಾಳಿ ಮಾಡುತ್ತಿದೆ. ಮನೆಯಲ್ಲಿ ಮಲಗಿರುವ ಜನರನ್ನು ಸೊಂಡಿಲಿನಿಂದ ಎತ್ತಿ ಅಪ್ಪಳಿಸಿ ಮತ್ತು ಎಳೆದಾಡಿ ಕೊಲ್ಲುತ್ತಿದೆ.
ಸಂಪಾದಕೀಯ ನಿಲುವುಒಂದು ಆನೆಯನ್ನು ಹಿಡಿಯಲಾಗದ ಆಡಳಿತವು ಯಾವ ಕೆಲಸಕ್ಕೆ ಬರುತ್ತದೆ ? |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ