ದೇವಘರ್ (ಜಾರಖಂಡ) ಬೈದ್ಯನಾಥ ಧಾಮದಲ್ಲಿ ಮಾರಾಟವಾಗುವ ಪ್ರಸಾದದಲ್ಲಿ ಕಲಬೆರಕೆ Jharkhand Temple Prasadam Adulteration

ದೇವಘರ್ (ಜಾರಖಂಡ) – ಶ್ರಾವಣ ಮಾಸದ ಜಾತ್ರೆಯಿಂದ ವಿಶ್ವವಿಖ್ಯಾತವಾಗಿರುವ ಬೈದ್ಯನಾಥ ಧಾಮದಲ್ಲಿ ವರ್ಷವಿಡೀ ಸಿಗುವ ‘ಚೂರಾ’ ಮತ್ತು ‘ಪೇಢಾ’ ಗಳನ್ನು ಪ್ರಸಾದ ಎಂದು ಪರಿಗಣಿಸಲಾಗುತ್ತದೆ. ಆದರೆ, ಆಹಾರ ಸುರಕ್ಷತಾ ಇಲಾಖೆಯು ಪಡೆದ ಮಾದರಿಗಳಲ್ಲಿ, ಈ ಪೇಢಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಲಬೆರಕೆ ಇರುವುದು ಬಯಲಾಗಿದೆ. ಇಲಾಖೆಯು ೭೨ ಅಂಗಡಿಗಳಿಂದ ಪೇಢಾ ಮಾದರಿಗಳನ್ನು ತೆಗೆದುಕೊಂಡಿತ್ತು. ರಾಂಚಿಯ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ ನಂತರ, ಕೆಲವು ಮಾದರಿಗಳಲ್ಲಿ ಮಣ್ಣು ಮಿಶ್ರಣವಾಗಿರುವುದು ಕಂಡುಬಂದಿದೆ. ಆಹಾರ ಸುರಕ್ಷತಾ ಅಧಿಕಾರಿ ಎಸ್.ಕೆ. ಸಿಂಹ ಅವರ ಪ್ರಕಾರ, ಈ ವರದಿಯ ಆಧಾರದ ಮೇಲೆ, ಕಲಬೆರಕೆ ಮಾಡಿದವರಿಗೆ ನೋಟೀಸ್ ನೀಡಿ, ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳ ದೊಡ್ಡ ವ್ಯಾಪಾರಿಗಳು ಕಡಿಮೆ ವೆಚ್ಚದ ಮಾವಾವನ್ನು ಯಂತ್ರಗಳ ಮೂಲಕ ತಯಾರಿಸುತ್ತಾರೆ, ನಂತರ ಅದನ್ನು ಪೇಢಾ ತಯಾರಿಸಲು ಬಳಸಲಾಗುತ್ತದೆ.

ಸಂಪಾದಕೀಯ ನಿಲುವು

ಪ್ರಸಾದದಲ್ಲಿ ಕಲಬೆರಕೆ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು!