ಜಮ್ಮು-ಕಾಶ್ಮೀರದ ಕಾರಾಗೃಹಗಳ ಮೇಲೆ ಭಯೋತ್ಪಾದಕ ದಾಳಿಯಾಗುವ ಸಾಧ್ಯತೆ

ಕಾರಾಗೃಹದಲ್ಲಿ ಜಿಹಾದಿ ಭಯೋತ್ಪಾದಕರು ಬಂಧನದಲ್ಲಿದ್ದಾರೆ

ಶ್ರೀನಗರ (ಜಮ್ಮು-ಕಾಶ್ಮೀರ) – ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಜಮ್ಮು-ಕಾಶ್ಮೀರದ ಕಾರಾಗೃಹಗಳಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಭಯೋತ್ಪಾದಕರು ಕಾರಾಗೃಹಗಳ ಮೇಲೆ ದಾಳಿ ಮಾಡಬಹುದು, ವಿಶೇಷವಾಗಿ ಶ್ರೀನಗರದ ಕೇಂದ್ರ ಕಾರಾಗೃಹ ಮತ್ತು ಜಮ್ಮುವಿನ ಕೋಟ ಬಲವಾಲ ಕಾರಾಗೃಹಗಳನ್ನು ಗುರಿಯಾಗಿಸಬಹುದು ಎಂದು ಹೇಳಲಾಗಿದೆ. ಜಮ್ಮು-ಕಾಶ್ಮೀರದ ಕಾರಾಗೃಹಗಳಲ್ಲಿ ಅನೇಕ ಕುಖ್ಯಾತ ಭಯೋತ್ಪಾದಕರು ಹಾಗೂ ಅವರಿಗೆ ಸಹಾಯ ಮಾಡುವ ಅಂದರೆ, ಭಯೋತ್ಪಾದಕರಿಗೆ ಸರಬರಾಜುಗಳನ್ನು ಒದಗಿಸುವ ಮತ್ತು ಅಡಗಿಕೊಳ್ಳಲು ಸ್ಥಳಗಳನ್ನು ತಿಳಿಸುವ ಜನರು ಇದ್ದಾರೆ.

ಮೇ 4 ರಂದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಾನಿರ್ದೇಶಕರು ಶ್ರೀನಗರದಲ್ಲಿ ಹಿರಿಯ ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಕಾರಾಗೃಹದ ಭದ್ರತೆಯನ್ನು ಪರಿಶೀಲಿಸಲಾಯಿತು ಮತ್ತು ಯಾವುದೇ ರೀತಿಯ ತಪ್ಪುಗಳನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಲಾಯಿತು. ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಭಯೋತ್ಪಾದಕರಿಗೆ ಸಹಾಯ ಮಾಡಿದ ನಿಸಾರ ಮತ್ತು ಮುಷ್ತಾಕ ಅವರನ್ನು ಕಾರಾಗೃಹದಲ್ಲಿ ಭೇಟಿ ಮಾಡಿ ವಿಚಾರಣೆ ನಡೆಸಿತು. ಅವರು ಸೇನಾ ವಾಹನದ ಮೇಲೆ ದಾಳಿ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಭಯೋತ್ಪಾದಕರಿಗೆ ಹಲವು ವರ್ಷಗಳ ಕಾಲ ಪೋಷಣೆ ನೀಡುವ ಬದಲು, ಅವರ ವಿರುದ್ಧ ತ್ವರಿತ ಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಏಕೆ ಪ್ರಯತ್ನಿಸಬಾರದು? ಕಳೆದ 35 ವರ್ಷಗಳಲ್ಲಿ ಎಷ್ಟು ಭಯೋತ್ಪಾದಕರಿಗೆ ಮತ್ತು ಅವರಿಗೆ ಸಹಾಯ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಿದೆ?