Kamlesh Tiwari Murder Case : ಹಿಂದುತ್ವನಿಷ್ಠ ಕಮಲೇಶ ತಿವಾರಿಯವರ ಹತ್ಯೆಯ ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ನಿರಾಕರಣೆ.

ಪ್ರಯಾಗರಾಜ (ಉತ್ತರ ಪ್ರದೇಶ) – ಹಿಂದೂ ಸಮಾಜ ಪಕ್ಷದ ನಾಯಕ ಕಮಲೇಶ ತಿವಾರಿ ಹತ್ಯೆ ಪ್ರಕರಣದ ಆರೋಪಿ ಸೈಯದ್ ಅಸಿಂ ಅಲಿ ಈ ಆರೋಪಿಗೆ ಜಾಮೀನು ನೀಡಲು ಅಲಹಾಬಾದ ಉಚ್ಚನ್ಯಾಯಾಲಯವು ನಿರಾಕರಿಸಿದೆ.

ಉಚ್ಚನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮೃತ (ತಿವಾರಿ) ರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದ್ದು, ಇದು ತೀವ್ರ ಧಾರ್ಮಿಕ ದ್ವೇಷದ ಪ್ರಕರಣವಾಗಿದೆ. ಆರೋಪಿಯು ಅಪರಾಧದಲ್ಲಿ ಸಹಭಾಗಿಯಾಗಿದ್ದನು ಮತ್ತು ದೊಡ್ಡ ಸಂಚಿನ ಭಾಗವಾಗಿದ್ದನು. ಇದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ. ಆರೋಪಿಯು ಹತ್ಯೆಯ ಮುನ್ನ ಅನೇಕ ಸಲ ಮುಖ್ಯ ದಾಳಿಕೋರರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿರುವ ಪುರಾವೆಗಳಿವೆ.ಈ ಹಿನ್ನೆಲೆಯಲ್ಲಿ ಅಪರಾಧದ ಗಂಭೀರತೆ ಮತ್ತು ಸಾಕ್ಷಿಗಳ ಮೇಲೆ ಪರಿಣಾಮ ಬೀರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಜಾಮೀನು ತಿರಸ್ಕರಿಸಲಾಗಿದೆಯೆಂದು ತಿಳಿಸಿದೆ.