ಹಿಂದೂ ರಾಷ್ಟ್ರ ಬೇಡ, ರಾಮರಾಜ್ಯ ಬೇಕು ! – ಭಾಜಪ ಸಂಸದ ಸಾಕ್ಷಿ ಮಹಾರಾಜ

ಭಾಜಪ ಸಂಸದ ಸಾಕ್ಷಿ ಮಹಾರಾಜರ ಹೇಳಿಕೆ !

ಉನ್ನಾವೋ (ಉತ್ತರ ಪ್ರದೇಶ) – ಹಿಂದೂ ರಾಷ್ಟ್ರವು ಅನೇಕ ದಮನಕಾರಿ ರಾಜರದ್ದಾಗಿತ್ತು. ಕಂಸನದ್ದೂ ಹಿಂದೂರಾಷ್ಟ್ರವಿತ್ತು. ಹಿಂದೂರಾಷ್ಟ್ರವಲ್ಲ, ಬದಲಾಗಿ ರಾಮರಾಜ್ಯ ಬೇಕಾಗಿದೆ. ಬಹಳ ವಿಚಾರ ಮಾಡಿದ ಬಳಿಕ ನನಗೆ ಇದು ತಿಳಿಯಿತು, ಎಂದು ಭಾಜಪ ಸಂಸದ ಸಾಕ್ಷಿ ಮಹಾರಾಜರು ಹೇಳಿದ್ದಾರೆ. ಅವರು ಇಲ್ಲಿ ಭಾಜಪದಿಂದ ಲೋಕಸಭೆಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಸಾಕ್ಷಿ ಮಹಾರಾಜರು ತಮ್ಮ ಮಾತನ್ನು ಮುಂದುವರಿಸುತ್ತಾ, ಜನವರಿ 22 ರಂದು ರಾಮರಾಜ್ಯದ ಸ್ಥಾಪನೆಯಾಗಿದೆ. ಈಗ ಹಿಂದೂ ರಾಷ್ಟ್ರಕ್ಕೆ ಯಾವುದೇ ಅರ್ಥವಿಲ್ಲ. ರಾಮರಾಜ್ಯದಲ್ಲಿ ಎಲ್ಲರಿಗೂ ಸಮಾನ ಅಧಿಕಾರಗಳಿವೆ. ನರೇಂದ್ರ ಮೋದಿ ಒಬ್ಬ ವ್ಯಕ್ತಿಯಲ್ಲ ಬದಲಾಗಿ ಅವರು ಅವತಾರಿ ಪುರುಷರಾಗಿದ್ದಾರೆ. ನಾವು ಧರ್ಮದ ಸ್ಥಾಪನೆ ಮಾಡಲು ಮತ್ತು ದುಷ್ಟರ ನಾಶ ಮಾಡಲು ಬಂದಿದ್ದೇವೆ. ಮೋದಿ ದೇವರ ಅವತಾರವಾಗಿದ್ದಾರೆ. ಎಲ್ಲಿಯವರೆಗೆ ಮೋದಿಜಿಯವರ ಶರೀರವಿದೆಯೋ, ಅಲ್ಲಿಯವರೆಗೆ ಮೋದಿಜಿಯವರು ಬಯಸಿದಂತೆಯೇ ಭಾರತದಲ್ಲಿ ನಡೆಯಲಿದೆ ಎಂದು ಹೇಳಿದರು

ಸಂಪಾದಕೀಯ ನಿಲುವು

ಮೊದಲ ಹಂತದಲ್ಲಿ, ದೇಶದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾದರೆ, ಮುಂದೆ ಅದು ರಾಮರಾಜ್ಯದಲ್ಲಿ ರೂಪಾಂತರಗೊಳ್ಳುತ್ತದೆ. ಆದುದರಿಂದ ಸಾಕ್ಷಿ ಮಹಾರಾಜರು ಮೊದಲು ದೇಶದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನ ಮಾಡಬೇಕು, ಎಂದು ಧರ್ಮಪ್ರೇಮಿ ಹಿಂದೂಗಳಿಗೆ ಅನಿಸುತ್ತದೆ !