ಪಡಿತರ ಎಂದು ವಿಸ್ಕಿ ಮತ್ತು ಬಿಯರ್ ನೀಡುವೆ ! – ಅಖಿಲ ಭಾರತೀಯ ಮಾನವತಾ ಪಕ್ಷದ ಅಭ್ಯರ್ಥಿ ವನಿತಾ ರಾವುತ

ಅಖಿಲ ಭಾರತೀಯ ಮಾನವತಾ ಪಕ್ಷದ ಅಭ್ಯರ್ಥಿ ವನಿತಾ ರಾವುತ ಇವರ ಆಶ್ವಾಸನೆ

ಚಂದ್ರಪುರ – ಚಂದ್ರಪುರ ಲೋಕಸಭಾ ಮತದಾರ ಕ್ಷೇತ್ರದಿಂದ ಚುನಾವಣೆಗಾಗಿ ಸ್ಪರ್ಧಿಸಿರುವ ಅಖಿಲ ಭಾರತೀಯ ಮಾನವತಾಪಕ್ಷದ ಅಭ್ಯರ್ಥಿ ವನಿತಾ ರಾವುತ್ ಇವರು ಮದಾರರಿಗೆ ಪಡಿತರ ಎಂದು ವಿಸ್ಕಿ ಮತ್ತು ಬಿಯರ್ ನೀಡುವ ಆಶ್ವಾಸನೆ ನೀಡಿದ್ದಾರೆ. ದೇಸಿ ಕುಡಿಯುವ ಬಡವರಿಗೆ ಕೂಡ ಒಳ್ಳೆಯ ಸಾರಾಯಿ ದೊರೆಯಲಿ, ಇದಕ್ಕಾಗಿ ಹೇಗೆ ಆಶ್ವಾಸನೆ ನೀಡಿರುವುದಾಗಿ ಅವರು ಹೇಳಿದರು.

೨೦೧೯ ರಲ್ಲಿ ರಾಹುತ್ ಇವರು ಚಿಮುರು ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಅವರು ‘ಎಲ್ಲಿ ಗ್ರಾಮದಲ್ಲಿ ಸಾರಾಯಿ ಅಂಗಡಿ’ ಹೀಗೆ ಆಶ್ವಾಸನೆ ನೀಡಿದ್ದರು. ಚಂದ್ರಪುರಕರರು ಅವರ ಈ ಆಶ್ವಾಸನೆಗೆ ಪ್ರತಿಕ್ರಿಯೆ ನೀಡದೆ ಇರುವುದರಿಂದ ಅವರು ಸೋತಿದ್ದರು. (ಜನರಿಗಾಗಿ ಹಿತವಾಗಿರುವ ಕೃತಿ ಮಾಡುವುದು ದೂರವೇ; ಆದರೆ ಅವರನ್ನು ವ್ಯಸನಿಗಳಾಗಿ ಮಾಡುವುದು ಎಷ್ಟು ಯೋಗ್ಯ ? ಈ ಅಂಶದ ಬಗ್ಗೆ ಮತದಾರರೇ ಯೋಚಿಸುವರು ! – ಸಂಪಾದಕರು)

ಸಂಪಾದಕೀಯ ನಿಲುವು

ಜನರಿಗೆ ಏನು ನೀಡಬೇಕು, ಇದು ಕೂಡ ತಿಳಿಯದೇ ಇರುವ ಅಭ್ಯರ್ಥಿ !