ಬದಾಯುನಲ್ಲಿ ನಡೆದ ಹತ್ಯಾಕಾಂಡದ ನಂತರ, ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸ್ವೀಕಾರ

ಬದಾಯುನಲ್ಲಿ ಇಬ್ಬರು ಮತಾಂಧ ಮುಸ್ಲಿಮರು ಇಬ್ಬರು ಅಪ್ರಾಪ್ತ ಹಿಂದೂ ಬಾಲಕರನ್ನು ಬರ್ಬರವಾಗಿ ಹತ್ಯೆ ಮಾಡಿದರು !

ಸೀತಾಪುರ (ಉತ್ತರ ಪ್ರದೇಶ) – ಉತ್ತರಪ್ರದೇಶದ ಬದಾಯುನಲ್ಲಿ ಸಾಜಿದ್ ಮತ್ತು ಜಾವೇದ್ ಹೆಸರಿನ ಕ್ರೂರಿಗಳು ಆಯುಷ್ ಮತ್ತು ಅಹಾನ್ ಎಂಬ ಇಬ್ಬರು ಅಪ್ರಾಪ್ತ ಹಿಂದೂ ಬಾಲಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಘಟನೆಯಿಂದ ಆಕ್ರೋಶಗೊಂಡು ಸೀತಾಪುರ ಜಿಲ್ಲೆಯ ಹೀನಾ ಆಲಿ ಎಂಬ 20 ವರ್ಷದ ಮುಸ್ಲಿಂ ಹುಡುಗಿ ಇಸ್ಲಾಂ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದಳು. ಮತಾಂತರದ ನಂತರ, ಮೃತಪಟ್ಟ ಮಕ್ಕಳ ತಾಯಿಯ ಹೆಸರು ಸಂಗೀತಾ ಆಗಿದ್ದರಿಂದ, ಹೀನಾ ತನ್ನ ಹೆಸರನ್ನು ಸಂಗೀತಾ ಎಂದು ಇಟ್ಟುಕೊಂಡಳು.

ಹಿಂದೂ ಯುವಕನೊಂದಿಗೆ ವಿವಾಹ!

ಹೀನಾ ಆಲಿ ಸೀತಾಪುರದ ಖೈರಾಬಾದ್ ನಿವಾಸಿಯಾಗಿದ್ದಾಳೆ. ಹೀನಾಳಿಗೆ ಮಹೇಶ ಎಂಬ ಹಿಂದೂ ಯುವಕನೊಂದಿಗೆ ಸ್ನೇಹವಿತ್ತು. ಈ ಸ್ನೇಹ ನಂತರ ಪ್ರೀತಿಗೆ ಬದಲಾಯಿತು. ಹೀನಾ ಮಹೇಶನೊಂದಿಗೆ ಮದುವೆಯಾಗಲು ನಿರ್ಣಯಿಸಿದಳು. ಸೀತಾಪುರ ನಗರದ ಕಾಂಶಿರಾಮ ಕಾಲನಿಯ ಶ್ರೀ ಕಾಳಿಮಾತಾ ದೇವಸ್ಥಾನದಲ್ಲಿ ಹೀನಾ ಮತ್ತು ಮಹೇಶ ವೈದಿಕ ಸಂಪ್ರದಾಯದಂತೆ ವಿವಾಹವಾದರು.