ಪ್ರಸಿದ್ಧ ಉದ್ಯಮಿ ರತನ್ ಟಾಟಾ ಇವರಿಗೆ ಬೆದರಿಕೆ !

ಮುಂಬಯಿ – ‘ಟಾಟಾ ಸನ್ಸ್’ ಗ್ರೂಪ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸೆಪ್ಟೆಂಬರ್ 4, 2022 ರಂದು ಅಪಘಾತದಲ್ಲಿ ನಿಧನರಾದರು. ಮುಂದೆ ವಿಶ್ವವಿಖ್ಯಾತ ಉದ್ಯಮಿ ರತನ್ ಟಾಟಾ ಅವರ ಜೀವನದಲ್ಲೂ ಇದೇ ಆಗಬಹುದು. ಹಾಗಾಗಿ ಅವರ ಭದ್ರತೆ ಹೆಚ್ಚಿಸಬೇಕು’, ಎಂದು ಪರೋಕ್ಷವಾಗಿ ಮುಂಬಯಿ ಪೊಲೀಸರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಬಂದಿದೆ. ಈ ಕರೆ ಕರ್ನಾಟಕದಿಂದ ಬಂದಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಕರೆ ಮಾಡುವವ ಪುಣೆ ನಿವಾಸಿಯಾಗಿದ್ದಾನೆ. ಅವನ ಹೆಂಡತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಅವನಿಗೆ ‘ಸ್ಕಿಜೋಫ್ರೇನಿಯಾ’ ಎಂಬ ಮಾನಸಿಕ ಕಾಯಿಲೆ ಇರುವುದು ಪತ್ತೆಯಾಯಿತು. ಕರೆ ಮಾಡುವವ ಉನ್ನತ ಶಿಕ್ಷಣ ಪಡೆದಿದ್ದಾರೆ. ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸರು ಕರೆ ಮಾಡಿದವನ ಹೆಸರು ಬಹಿರಂಗಪಡಿಸಿಲ್ಲ.