ಹೆಂಡತಿ ತನ್ನ ಗಂಡನನ್ನು ‘ಕಪ್ಪು’ ಎಂದು ಕರೆದು ಅವಮಾನಿಸುವುದು ಕ್ರೌರ್ಯ ! – ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು – ರಾಜ್ಯದ ಉಚ್ಚ ನ್ಯಾಯಾಲಯ ನೀಡಿದ ಒಂದು ತೀರ್ಪಿನಲ್ಲಿ, ಹಂಡತಿಯು ತನ್ನ ಗಂಡನನ್ನು ಕಪ್ಪು ಎಂದು ಕರೆದು ಅವಮಾನಿಸುವುದು ಕ್ರೌರ್ಯ ಎಂದು ಹೇಳಿದೆ. ಇದರ ಆಧಾರದ ಮೇಲೆ ವಿಚ್ಛೇದನ ನೀಡಬಹುದು ಎಂದು ಪ್ರತಿಕ್ರಿಯಿಸಿ ಉಚ್ಚ ನ್ಯಾಯಾಲಯ ದಂಪತಿಯೊಂದರ ವಿಚ್ಛೇದನೆಗೆ ಒಪ್ಪಿಗೆ ನೀಡಿದೆ.

ದಂಪತಿಗಳು 2007 ರಲ್ಲಿ ವಿವಾಹವಾಗಿದ್ದರು ಮತ್ತು ಅವರಿಗೆ ಒಬ್ಬ ಮಗಳಿದ್ದಾಳೆ. 2012 ರಲ್ಲಿ ಗಂಡ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2017 ರಲ್ಲಿ, ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಗಂಡ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿ ನ್ಯಾಯಾಲಯ ಅವರ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದೆ.