ರಾಜ್ಯದಲ್ಲಿ ಮಹಿಳೆಯರಿಗೆ ಸರಕಾರಿ ಬಸ್ಸುಗಳ ಉಚಿತ ಪ್ರಯಾಣದಿಂದ ದತ್ತಿ ಇಲಾಖೆಯ ದೇವಸ್ಥಾನಗಳ ಆದಾಯದಲ್ಲಿ ಏರಿಕೆ !

ಬೆಂಗಳೂರು – ರಾಜ್ಯದ ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳಿಗೆ ಕಳೆದ 2 ತಿಂಗಳಿಂದ ಕಾಣಿಕೆಯಲ್ಲಿ ಭಾರಿ ಏರಿಕೆಯಾಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಸರಕಾರ ಉಚಿತ ಬಸ್ ಪ್ರಯಾಣ ಮಾಡಿದ ನಂತರ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈವರೆಗೆ ರಾಜ್ಯದ 58 ದೇವಸ್ಥಾನಗಳ ಕಾಣಿಕೆ ಹುಂಡಿಗಳಲ್ಲಿ 25 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ ಈ ಮೊತ್ತ 19 ಕೋಟಿ ರೂಪಾಯಿ ಇತ್ತು.

ಸಂಪಾದಕೀಯ ನಿಲುವು

ಈ ಹೆಚ್ಚಿದ ಆದಾಯವನ್ನು ಸರಕಾರ ಯಾವುದಕ್ಕೆ ಬಳಸುತ್ತದೆ ?, ಎಂಬುದು ಜನರಿಗೆ ಹೇಳಬೇಕು !