RSSಗೆ 35ಕ್ಕೂ ಹೆಚ್ಚು ಎಕರೆ ಭೂಮಿ ಮಂಜೂರು ಮಾಡಿದ್ದ ಭಾಜಪದ ನಿರ್ಧಾರಕ್ಕೆ ರಾಜ್ಯ ಸರಕಾರದಿಂದ ತಡೆ

ಸಚಿವ ಕೃಷ್ಣ ಬೈರೆಗೌಡಾ

ಬೆಂಗಳೂರು – ರಾಜ್ಯ ಸರಕಾರವು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೀಡಲಾಗಿದ್ದ 35 ಎಕರೆ 33 ಗುಂಟೆ ಗೋಮಾಳ ಭೂಮಿಯನ್ನು ಹಸ್ತಾಂತರಿಸುವ ಆದೇಶವನ್ನು ತಡೆಹಿಡಿದಿದೆ. ಹಿಂದಿನ ಭಾಜಪ ಸರಕಾರವು ಸಂಘದ `ಜನಸೇವಾ ಟ್ರಸ್ಟ’ ಗೆ ಗೋಮಾಳ ಭೂಮಿಯನ್ನು ನೀಡುವ ಆದೇಶವನ್ನು ಜಾರಿಮಾಡಿತ್ತು; ಆದರೆ ಈಗಿನ ರಾಜ್ಯ ಸರಕಾರವು ಇಷ್ಟು ಭೂಮಿಯನ್ನು ಮಂಜೂರು ಮಾಡಲು ನಿರಾಕರಿಸಿದೆ. ಈ ಮಾಹಿತಿಯನ್ನು ಸಚಿವ ಕೃಷ್ಣ ಬೈರೆಗೌಡಾ ಇವರು ನೀಡಿದ್ದಾರೆ.