ಗೋರಕ್ಷಕರನ್ನು ಒದ್ದು ಜೈಲಿಗೆ ಹಾಕಬೇಕಂತೆ !’ – ಸಚಿವ ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಮಗ ಹಾಗೂ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಇವರಿಂದ ಬಕ್ರಿ ಈದ್ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರಿಗೆ ಆದೇಶ !

ಬೆಂಗಳೂರು – ಬಕ್ರಿ ಈದ್ ಸಂದರ್ಭದಲ್ಲಿ ‘ಕಾನೂನನ್ನು ಕೈಗೆತ್ತಿಕೊಳ್ಳುವ ಗೋರಕ್ಷಕರನ್ನು ಒದ್ದು ಜೈಲಿಗೆ ಹಾಕಿರಿ’, ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಸಚಿವ ಪ್ರಿಯಾಂಕ್ ಖರ್ಗೆ ಇವರು ಕರ್ನಾಟಕ ಪೊಲೀಸರಿಗೆ ಆದೇಶ ನೀಡಿದ್ದಾರೆ.
ಪ್ರಸಾರಮಾಧ್ಯಮಗಳು ನೀಡಿದ ವರದಿಯ ಪ್ರಕಾರ, ಪ್ರಿಯಾಂಕ್ ಖರ್ಗೆ ಅವರು ಕಲ್ಬುರ್ಗಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಅವರು ಬಜರಂಗದಳದ ಹೆಸರನ್ನು ಹೇಳದೇ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ‘ಸ್ವಘೋಷಿತ ನಾಯಕರೊಬ್ಬರು ಕೋಮು ವಿಚಾರಗಳ ಹೆಸರಿನಲ್ಲಿ ವಿಷ ಕಕ್ಕುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’, ಎಂದೂ ಸಹ ಹೇಳಿದರು.