ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಭವಿಷ್ಯವಾಣಿ

ಮಳೆಗಾಲದಲ್ಲಿ 2-3 ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ !

ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಶಿರಸಿ – ಭಾರತದ ಗಂಡಾಂತರ ಇನ್ನೂ ದೂರವಾಗಿಲ್ಲ. ದೇಶ ಅದನ್ನು ಎದುರಿಸಬೇಕಾಗಿದೆ. ದೇಶಕ್ಕೆ ಒಂದು ಗಂಡಾಂತರ ಎದುರಾಗಲಿದೆ. ಮಳೆ, ಗುಡುಗು, ಮಿಂಚು ಏಕಾಏಕಿ ಅಪ್ಪಳಿಸಲಿದೆ.ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿದೆ. ಬೇರೆಡೆ ನಡೆಯುವ ಬಾಂಬ್ ದಾಳಿಗೆ ದೇಶಕ್ಕೆ ಹಾನಿಯಾಗಲಿದೆ ಎಂದು ಭವಿಷ್ಯ ನುಡಿದರು.

ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದ ಕೋಡಿಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದ್ದರು. ಹಾಗೆಯೇ ಈ ವರ್ಷ ದೊಡ್ಡ ಅಪಘಾತ ನಡೆಯಲಿದೆಯೆಂದು ಹೇಳಿದ್ದರು. ಅದರಂತೆಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆದುಕೊಂಡು ಅಧಿಕಾರವನ್ನು ಸ್ಥಾಪಿಸಿದೆ. ಹಾಗೆಯೇ ಓಡಿಸ್ಸಾದ ಬಾಲಾಸೋರನಲ್ಲಿ ನಡೆದ ಭೀಷಣ ರೈಲು ಅಪಘಾತದಲ್ಲಿ ಕನಿಷ್ಟ 280 ಜನರು ಸಾವನ್ನಪ್ಪಿದ್ದಾರೆ. ಇದರಿಂದ ಸ್ವಾಮೀಜಿಯವರು ಇಲ್ಲಿಯವರೆಗೆ ನುಡಿದಿರುವ ಭವಿಷ್ಯವಾಣಿ ಸತ್ಯವಾಗಿದೆಯೆಂದು ಹೇಳಲಾಗಿದೆ.

ಸಿದ್ಧರಾಮಯ್ಯನವರು ಧರ್ಮವನ್ನು ಬಿಟ್ಟು ನಡೆದರೆ ದೇವರೇ ಉತ್ತರ ನೀಡುತ್ತಾನೆ

ಸಿದ್ಧರಾಮಯ್ಯನವರ ನಾಯಕತ್ವದಲ್ಲಿ ಕರ್ನಾಟಕದ ಸರಕಾರದ ವಿಷಯದಲ್ಲಿ ಮಾತನಾಡುವಾಗ ಸ್ವಾಮೀಜಿಯವರು ಹೇಳಿರುವುದೇನೆಂದರೆ ರಾಜ್ಯದಲ್ಲಿ ಯಾರು ಧರ್ಮಾನುಸಾರ ನಡೆಯುತ್ತಾರೆಯೋ, ಅವರಿಗೆ ಒಳ್ಳೆಯದಾಗಲಿದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಧರ್ಮವನ್ನು ಬಿಟ್ಟು ನಡೆದರೆ, ದೇವರೇ ಅವರಿಗೆ ಉತ್ತರ ನೀಡುತ್ತಾರೆ. ಗೋಹತ್ಯೆನಿಷೇದ ಕಾನೂನು ಹಿಂಪಡೆಯುವ ಬಗ್ಗೆ ರಾಜ್ಯದ ವಿವಿಧ ಮಂತ್ರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರು ನುಡಿದಿರುವ ಭವಿಷ್ಯ ಮಹತ್ವಪೂರ್ಣವಾಗಿದೆಯೆಂದು ಹೇಳಲಾಗುತ್ತಿದೆ.