ಉಲ್ಲಾಸನಗರದಲ್ಲಿ 1 ತಿಂಗಳಿನಲ್ಲಿ 6 ಹಿಂದೂ ಯುವತಿಯರು ಮುಸಲ್ಮಾನರೊಂದಿಗೆ ಪರಾರಿ

ಮುಂಬಯಿ, ಮೇ 7 (ವಾರ್ತೆ) – ದೇಶಾದ್ಯಂತ `ದಿ ಕೇರಳ ಸ್ಟೋರಿ’ ಚಲನಚಿತ್ರದಿಂದ `ಲವ್ ಜಿಹಾದ’ನ ಭೀಕರತೆಯ ವಾಸ್ತವತೆ ಜಗತ್ತಿನೆಲ್ಲೆಡೆ ಬಹಿರಂಗವಾಗುತ್ತಿರುವಾಗ, ಲವ್ ಜಿಹಾದ ಮಹಾರಾಷ್ಟ್ರವನ್ನು ನಿಧಾನವಾಗಿ ಸುತ್ತುವರಿಯುತ್ತಿರುವುದು ಕಂಡು ಬರುತ್ತಿದೆ. ಠಾಣೆ ಜಿಲ್ಲೆಯ ಉಲ್ಲಾಸನಗರದಿಂದ ಕಳೆದ ತಿಂಗಳಿನಲ್ಲಿ 6 ಹಿಂದೂ ಯುವತಿಯರು ಮುಸಲ್ಮಾನ ಯುವಕರೊಂದಿಗೆ ಓಡಿ ಹೋಗಿದ್ದಾರೆ. ಓಡಿ ಹೋಗಿರುವ ಹುಡುಗಿಯರ ಪೋಷಕರಿಂದ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ. ಓಡಿ ಹೋಗಿರುವ ಹಿಂದೂ ಹುಡುಗಿಯರು ಸಾಮಾನ್ಯ ಕುಟುಂಬದವರಾಗಿದ್ದಾರೆ.

1. ಇದರಲ್ಲಿ ಒಬ್ಬ ಯುವತಿ ಬಂಗಾಲ, ಒಬ್ಬ ಯುವತಿ ಮಥುರಾ ಮತ್ತು ಒಬ್ಬಳು ಝಾರಖಂಡದಿಂದ ಬಂದಿರುವ ಕುಟುಂಬಕ್ಕೆ ಸೇರಿದವಳಾಗಿದ್ದಾರೆ. ಇನ್ನುಳಿದ 3 ಹುಡುಗಿಯರು ಸ್ಥಳೀಯ ಸಿಂಧಿ ಕುಟುಂಬದವರಾಗಿದ್ದಾರೆ. ಇದರಲ್ಲಿ ಒಬ್ಬ ಯುವತಿ ಮುಸಲ್ಮಾನ ಯುವಕನೊಂದಿಗೆ ಬಿಹಾರಕ್ಕೆ ಓಡಿ ಹೋಗಿರುವುದು ಪೊಲೀಸ ತನಿಖೆಯಿಂದ ತಿಳಿದು ಬಂದಿದೆ.

2. ಇತರೆ ಧರ್ಮದವರೊಂದಿಗೆ ಓಡಿ ಹೋಗುತ್ತಿರುವ ಹಿಂದೂ ಯುವತಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಪೊಲೀಸರಿಂದ ಯಾವುದೇ ನಿರ್ದಿಷ್ಟ ಕಾರ್ಯವನ್ನು ನಡೆಸಲಾಗುತ್ತಿಲ್ಲ. (‘ಲವ್ ಜಿಹಾದ ಮತ್ತಷ್ಟು ಹರಡಲು ಪೊಲೀಸರೇ ಜವಾಬ್ದಾರರಾಗಿದ್ದಾರೆ’, ಎಂದು ಹೇಳಿದರೆ ತಪ್ಪೇನಿದೆ ? – ಸಂಪಾದಕರು) ಇದರಿಂದ 2 ದಿನಗಳ ಹಿಂದೆ ಎಲ್ಲ ಹಿಂದೂ ಸಮಾಜದ ವತಿಯಿಂದ ಕೆಲವು ಹಿಂದುತ್ವನಿಷ್ಠರು ಇಲ್ಲಿಯ ಸೆಂಟ್ರಲ್ ಪೊಲೀಸ ಠಾಣೆಗೆ ತೆರಳಿ ಈ ಯೋಜಿತ ಷಡ್ಯಂತ್ರದ ತನಿಖೆ ನಡೆಸಿ ಹಿಂದೂ ಯುವತಿಯರನ್ನು ತಕ್ಷಣವೇ ಶೋಧಿಸಬೇಕೆಂದು ಮನವಿ ಮಾಡಿದ್ದಾರೆ.

3. ಓಡಿ ಹೋಗಿರುವ ಹಿಂದೂ ಯುವತಿಯರು ಮನೆಗೆ ಬರದಿದ್ದರೆ ಆಂದೋಲನ ನಡೆಸುವುದಾಗಿ ಹಿಂದುತ್ವನಿಷ್ಠ ಸಂಘಟನೆಯವರು ಎಚ್ಚರಿಕೆಯನ್ನು ನೀಡಿದ್ದಾರೆ.

4. ಕಳೆದ ಕೆಲವು ವರ್ಷಗಳಿಂದ ಉಲ್ಲಾಸನಗರದಲ್ಲಿ ನಿರಂತರವಾಗಿ ಕ್ರೈಸ್ತ ಮಿಶನರಿಗಳು ಆಮಿಷವನ್ನೊಡ್ಡಿ ಸ್ಥಳೀಯ ಸಿಂಧಿ ಯುವತಿಯರನ್ನು ಮತಾಂತರಗೊಳಿಸುತ್ತಿದ್ದಾರೆ. ಈ ರೀತಿ ಕಳೆದ ಕೆಲವು ವರ್ಷಗಳಲ್ಲಿ ಉಲ್ಲಾಸನಗರದಲ್ಲಿ ಸಾವಿರಾರು ಹಿಂದೂ ಯುವತಿಯರನ್ನು ಕ್ರೈಸ್ತರನ್ನಾಗಿ ಮತಾಂತರಿಸಲಾಗಿದೆ. ಅದರ ಹಿಂದೆಯೇ ಈಗ `ಲವ್ ಜಿಹಾದ’ನ ಹೆಚ್ಚುತ್ತಿರುವ ಪ್ರಕರಣದಿಂದ ಇಲ್ಲಿಯ ಸ್ಥಳೀಯ ಹಿಂದೂಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. (ಹಿಂದೂ ಯುವತಿಯರೇ, ಮತಾಂತರಗೊಂಡು ನಿಮ್ಮ ಜೀವನದಲ್ಲಿ ತೀವ್ರ ತೊಂದರೆಗೆ ಅನುಭವಿಸುವುದಕ್ಕಿಂತ ಹಿಂದೂ ಧರ್ಮವನ್ನೇ ಅವಲಂಬಿಸಿರಿ ! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂ ಯುವತಿಯರಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರು ಲವ್ ಜಿಹಾದ್ ಗೆ ಬಲಿಯಾಗಿ ತಮ್ಮ ಜೀವನವನ್ನು ನಷ್ಟಗೊಳಿಸುತ್ತಿದ್ದಾರೆ !