‘ಏನು ಕೆಲಸ ಮಾಡಿದ್ದೀರಿ ?’, ಎಂದು ಹೇಳಿದ ಯುವಕನಿಗೆ ಕಾಂಗ್ರೆಸ್ ಮುಖಂಡರಿಂದ ಥಳಿತ !

ಕಾಂಗ್ರೆಸ್ಸಿಗೆ ಮತ ನೀಡದಿದ್ದಲ್ಲಿ ಮುಖಂಡರಿಂದ ಕೊಲೆ ಬೆದರಿಕೆ !

ತುಮಕೂರು – ವಿಜಯಪುರದಲ್ಲಿ ಕೆಲವು ದಿನಗಳ ಹಿಂದೆ ನಡೆದಿರುವ ಕಾಂಗ್ರೆಸ್ ನ ಪ್ರಚಾರ ಸಭೆಯಲ್ಲಿ ಓರ್ವ ಯುವಕನು ಕಾಂಗ್ರೆಸ್ಸಿನ ನಾಯಕ ಎಂ.ಬಿ. ಪಾಟೀಲ್ ಇವರಿಗೆ, ನಮ್ಮ ಗ್ರಾಮದಲ್ಲಿ ಅಭಿವೃದ್ಧಿಯ ಕೆಲಸ ನಡೆದಿಲ್ಲ’, ಈ ಬಗ್ಗೆ ಪ್ರಶ್ನೆ ಕೇಳಿದ್ದರಿಂದ ಪಾಟೀಲ್ ಇವರು ಆ ಯುವಕನ ಕೆನ್ನೆಗೆ ಬಾರಿಸಿರುವ ವಿಡಿಯೋ ಎಲ್ಲಾ ಕಡೆ ಪ್ರಸಾರಗೊಂಡಿದ್ದು. ಈಗ ಇಂತಹ ಘಟನೆ ತುಮಕೂರು ಜಿಲ್ಲೆಯ ಜ್ಯೋತಿ ನಗರದಲ್ಲಿ ನಡೆದಿದೆ.

ಜ್ಯೋತಿ ನಗರದ ಜಿತೇಂದ್ರ ಎಂಬ ಯುವಕನು, ‘ಪ್ರಜಾಪ್ರಭುತ್ವದಲ್ಲಿ ಮತದಾರರು ತಮಗೆ ಇಷ್ಟದ ಪಕ್ಷಕ್ಕೆ ಮತ ಮಾಡಬಹುದು. ಅದು ಅವನ ಅಧಿಕಾರವಾಗಿದೆ. ‘ಕಾಂಗ್ರೆಸ್ಸಿಗೆ ಮತ ನೀಡುವುದಿಲ್ಲ’. ಎಂದು ಹೇಳಿಕೆ ನೀಡಿದನು. ಆದ್ದರಿಂದ ಕಾಂಗ್ರೆಸ್ಸಿನ ಮುಖಂಡ ಗೋಣಿ ಹಳ್ಳಿ ದೇವರಾಜು ಮತ್ತು ಅವನ ಮೂರು ಸಹಚರರು ಜಿತೇಂದ್ರನ ಮೇಲೆ ದಾಳಿ ನಡೆಸಿದರು. ದೇವರಾಜು ಇವನು, ‘ನೀನು ಕಾಂಗ್ರೆಸ್ಸಿಗೆ ಮತ ನೀಡದೆ ಇದ್ದರೆ ನೀನು ಬದುಕುವುದಿಲ್ಲ, ನಿನ್ನನ್ನು ಕೊಂದುಬಿಡುವೆ.’ ಎಂದು ಬೆದರಿಕೆ ನೀಡಿ ಅವನನ್ನು ಥಳಿಸಿದರು. ಇದರಲ್ಲಿ ಜಿತೇಂದ್ರನ ಹಲ್ಲುಗಳು ಮುರಿದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಲ್ಲಿ ದೂರು ನೀಡಲಾಗಿದೆ.

(ಸೌಜನ್ಯ – NewsFirst Kannada)

ಸಂಪಾದಕರ ನಿಲುವು

‘ಕಾಂಗ್ರೆಸ್ ಎಂದರೆ ರೌಡಿಗಳ ತಂಡ’, ಹೀಗೆ ಯಾರಾದರೂ ಹೇಳಿದರೆ ಆಶ್ಚರ್ಯವೇನು ಇಲ್ಲ !

ಹಿಂದೂಗಳ ನಾಯಕರು ಮತ್ತು ಸಂಘಟನೆಗಳನ್ನು ‘ಭಯೋತ್ಪಾದಕ’ರೆನ್ನುವ ಕಾಂಗ್ರೆಸ್ ತಾವೇ ಭಯೋತ್ಪಾದಕ’ರೆಂದು ಹೇಳುವುದೇ ?